Friday, 22 December 2017

#ಮರ್ಕಝಿನತ್ತ_ಸೈಕಲ್_ತುಳಿಯುತ್ತಿರುವ_ಸಾಗರದ_ವೃದ್ಧ.


ಇವರು ಮೂಲತ ಕೇರಳದ ಕೊಲ್ಲಂನವರು. ವಯಸ್ಸು ಎಂಬತ್ತು ದಾಟಿದೆ. ಕಳೆದ ನಲ್ವತ್ತೈದು ವರ್ಷಗಳಿಂದ ಸಾಗರದಲ್ಲಿ ವಾಸವಿದ್ದಾರೆ. ಇದೀಗ ಪ್ರಾಯಾಧಿಕ್ಯವನ್ನೇನೂ ಲೆಕ್ಕಿಸದೆ ಮರ್ಕಝಿನತ್ತ ಸೈಕಲ್ ತುಳಿಯುತ್ತಿದ್ದಾರೆ. ಜನವರಿ 4,5,6,7ರಂದು ನಡೆಯುವ ಜಗದ್ವಿಖ್ಯಾತ ವಿದ್ಯಾ ಸಮುಚ್ಚಯ ಜಾಮಿಅ ಮರ್ಕಝಿನ ಐತಿಹಾಸಿಕ ನಲ್ವತ್ತನೇ ವಾರ್ಷಿಕ ರೂಬೀ ಜುಬಿಲೀ ಸಮ್ಮೇಳನದ ಪ್ರಚಾರಾರ್ಥ. ಕಳೆದ ಸೋಮವಾರ ಹೊರಟ ಯಾತ್ರೆ ಇವತ್ತು(ಶನಿವಾರ)ಮೂಡಬಿದ್ರೆ ತಲುಪಿದೆ. ದಿನಕ್ಕೆ ಐವತ್ತು-ಐವತ್ತೈದು ಕಿ.ಮೀ ಕ್ರಮಿಸುತ್ತಾರಂತೆ.





ಯಾವಾಗ ಮರ್ಕಝ್ ತಲುಪಬಹುದೆಂಬ ಪ್ರಶ್ನೆಗೆ "ಎಲ್ಲವೂ ಅಲ್ಲಾಹನ ಇಚ್ಚೆಯಂತೆ" ಎಂಬ ಉತ್ತರ. ಇಂತಹ ಸೈಕಲ್ ಸಾಹಸಿಕ ಯಾತ್ರೆ ಇದೇ ಮೊದಲಲ್ಲ. ಮರ್ಕಝಿಗೆ ಈ ಮೊದಲೊಮ್ಮೆ ತೆರಳಿದ್ದಾರೆ. ದೂರದ ಮುತ್ತುಪೇಟೆ,ನಾಗೂರ್ ವರೆಗೂ ಸೈಕಲಲ್ಲೇ ಹೋಗಿ ಬಂದಿದ್ದಾರೆ. ಶೈಖುನಾ ಎ.ಪಿ ಉಸ್ತಾದರ ಆಶೀರ್ವಾದ ಪಡೆದ ಬಳಿಕವೇ ಆ ಯಾತ್ರೆ ಕೈಗೊಂಡದ್ದಂತೆ. ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಮೇಲಿರುವ ಪ್ರೀತಿಯೇ ಇದಕ್ಕೆ ಪ್ರೇರಣೆಯೆನ್ನುತ್ತಾರೆ. ತನ್ನ ಪುರುಷಾಯುಸ್ಸನ್ನಿಡೀ ಸಮುದಾಯದ ಸಮುದ್ಧಾರಕ್ಕಾಗಿ ವ್ಯಯಿಸಿದ ಉಸ್ತಾದರ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ನೂರು ನಾಲಗೆ. ಕೊನೆಗೆ ತನ್ನನ್ನೇ ಮರೆತು "ನೀವೆಲ್ಲರೂ ಎ.ಪಿ ಉಸ್ತಾದರಿಗಾಗಿ,ಮರ್ಕಝಿಗಾಗಿ ದುಆ ಮಾಡಿ" ಎನ್ನುತ್ತಾ ಭಾವುಕರಾಗಿ ಬಿಡುತ್ತಾರೆ.
ಇವತ್ತು ಸುಬ್ ಹಿ ನಮಾಜಿಗೆ ದ್ಸಿಕ್ರಾದ ವಿದ್ಯಾರ್ಥಿಗಳ ಜೊತೆಗಿದ್ದರು. ಈ ಪ್ರಾಯಾಧಿಕ್ಯದ ಸಂದರ್ಭದಲ್ಲೂ ಎ.ಪಿ ಉಸ್ತಾದರಿಗೆ ಬೆಂಬಲವಾಗಿ,ಮರ್ಕಝಿನ ಪ್ರಚಾರ ಕೈಗೊಂಡಿರುವ ಇಬ್ರಾಹಿಂ ಸಾಹೇಬ್ ರವರನ್ನು ದ್ಸಿಕ್ರಾದ ವತಿಯಿಂದ ಶಾಲು ಹೊದಿಸಿ,ಸನ್ಮಾನಿಸಿ ಬೀಳ್ಕೊಟ್ಟೆವು.
ಇಂತಹ ನಿಷ್ಕಳಂಕ ವ್ಯಕ್ತಿಗಳ ನಿಸ್ವಾರ್ಥ ಪ್ರಾರ್ಥನೆ ಮತ್ತು ಬೆಂಬಲಗಳೇ ಇವತ್ತು ಶೈಖುನಾ ಮತ್ತು ಮರ್ಕಝಿನ ಆಸ್ತಿ. ಈ ರೀತಿ ಲಕ್ಷಗಟ್ಟಲೆ ವಿಶ್ವಾಸಿ ಸಮೂಹವು ಶೈಖುನಾರನ್ನೂ,ಮರ್ಕಝನ್ನೂ ಹೃದಯದಲ್ಲಿ ಜೋಪಾನವಾಗಿ ಕಾಪಿಟ್ಟು ಕೊಳ್ಳಲು ಶೈಖುನಾ ಈ ಸಮುದಾಯಕ್ಕಾಗಿ ಸಮರ್ಪಿಸಿದ ಅನೂಹ್ಯವಾದ ಸಾಧನೆಗಳೇ ಕಾರಣ. ಮರ್ಕಝ್ ಅದೊಂದು ಇತಿಹಾಸವಾಗಿ,ಅಳಿಸಲಾರದ ಪರಂಪರೆಯಾಗಿ ಜನಮನಸ್ಸುಗಳಲ್ಲಿ ಬೇರೂರಿಬಿಟ್ಟಿದೆ.



ಅಲ್ಲಾಹ್...ಶೈಖುನಾರಿಗೆ ಆಫಿಯತ್,ದೀರ್ಘಾಯುಷ್ಯ ಕರುಣಿಸು.ಅವರ ಅನುಪಮ ಸೇವೆಯ ಹಾದಿಗಳಲ್ಲಿ ಬೆಂಬಲ,ಸಹಾಯಗಳೊಂದಿಗೆ ಬೆನ್ನೆಲುಬಾಗಿ ನಿಲ್ಲುವ ಸರ್ವರಿಗೂ ನೀನು ಒಳಿತುಗಳನ್ನನುಗ್ರಹಿಸು....ಆಮೀನ್.
*ಸಖಾಫಿ ಜೀರ್ಮುಕ್ಕಿ*

ಎಸ್ ಎಸ್ ಎಫ್ ಬಂಟ್ವಾಳ ಡಿವಿಷನ್ ಪ್ರತಿಭೋತ್ಸವ



ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಪ್ರತಿಭೋತ್ಸವ
ಕಾರ್ಯಕ್ರಮವು ಡಿಸೆಂಬರ್ 24 ರಂದು ಬಿಸಿ ರೋಡಿನ ಸ್ಪರ್ಶಾ ಹಾಲಿನಲ್ಲಿ ಡಿವಿಜನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ರವರ ಅಧ್ಯಕ್ಷತೆಯಲ್ಲಿ 
ನಡೆಯಲಿದೆ.


 ಕಾರ್ಯಕ್ರಮವನ್ನು ಕೆಸಿಎಫ್ ಇಂಟರ್ನ್ಯಾಷನಲ್ ಸಮಿತಿಯ ಅಧ್ಯಕ್ಷರಾದ ಎಸ್ ಪಿ ಹಂಝ ಸಖಾಫಿ ಉಸ್ತಾದರು ಉಧ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ,  ಅಬೂಸ್ವಾಲಿಹ್ ಉಸ್ತಾದ್,ಹಂಝ ಮದನಿ ಮಿತ್ತೂರು, ಮುಹಮ್ಮದ್ ಅಲಿ ಸಖಾಫಿ, ಅಶ್ರಫ್ ಸಖಾಫಿ ಆಲಡ್ಕ, ಇಬ್ರಾಹಿಮ್ ಸಖಾಫಿ ಸೆರ್ಕಳ,ಖಲೀಲ್ ಮುಸ್ಲಿಯಾರ್ ಬೋಳಂತೂರು, ಅಬ್ದುಲ್ ಬಶೀರ್ ಮಿತ್ತಬೈಲು, ಅಬ್ದುಲ್ಲ ಕೊಳಕೆ, ಇಸ್ಮಾಯಿಲ್ ನಾವೂರು,ಕಲಂದರ್ ಪದ್ಮುಂಜ, ಅಲಿ ತುರ್ಕಳಿಕೆ, ಶರೀಫ್ ನಂದಾವರ, ಹಂಝ ಮೈಂದಾಳ ಹಾಗೂ ಇನ್ನಿತರ ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆ 
ಎಂದು ಎಸ್ ಎಸ್ ಎಫ್‌ ಬಂಟ್ವಾಳ ಡಿವಿಷನ್ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಣೆಮಂಗಳೂರು ಸೆಕ್ಟರ್ ನಿಂದ ಬಂಟ್ವಾಳ ಡಿವಿಷನ್ಗೆ ಆಯ್ಕೆಯಾದ ಸ್ಪರ್ಧಾಥಿಗಳ ವಿವರ

ಅಸ್ಸಲಾಮು‌ ಅಲೈಕುಂ
ಎಸ್‌ ಎಸ್ ಎಫ್ ಪ್ರತಿಭೋತ್ಸವ
ಪಾಣೆಮಂಗಳೂರು ಸೆಕ್ಟರ್ ನಿಂದ ಬಂಟ್ವಾಳ ಡಿವಿಷನ್ಗೆ ಆಯ್ಕೆಯಾದ ಸ್ಪರ್ಧಾಥಿಗಳು

1 ಕೊಳಕೆ ಶಾಖೆ 
            ಜೂನಿಯರ್
೧ ಝಿಯಾದ್(ಕಥೆ ಹೇಳುವುದು)  
೨ ಹರ್ಷದ್ (ಬುಕ್ಟೆಸ್ಟ್  ಉರ್ದು ಭಾಷಣ)
     ಸೀನಿಯರ್
೧ ತೌಸೀಫ್ (ಬುಕ್ ಟೆಸ್ಟ್  ಉರ್ದು ಭಾಷಣ) 
೨ ಜುನೈದ್ (ಕನ್ನಡ ಭಾಷಣ)
       ದಅ್ವಾ  ಜೂನಿಯರ್
೧ ಸವಾದ್ (ಕನ್ನಡ ಪ್ರಬಂಧ)
೨ ಅಮೀನ್ (ಕಿತಾಬ್ ಟೆಸ್ಟ್ ಬೈತ್ ಹಿಫ್ಳ್ ಮಳಯಾಳ ವಅಳ್ )
೩ ಸಪಾಫ್ (ದಅ್ವಾ ಲೆಟರ್ ಕನ್ನಡ ಬಾಷಣ) 
೪ ರಿಝ್ವಾನ್ (ಮಳಯಾಳ ಹಾಡು)
೫ ಅನಸ್ (ಉರ್ದು ನಅತ್ )
        ಜನರಲ್
೧ ಅಮೀನ್ ಮೌಸೂಪ್ ಸವಾದ್(ಕ್ರಾಂತಿ ಗೀತೆ)
೨ ರಿಝ್ವಾನ್ ಅನಸ್ ಅಮೀನ್    ಹಾಶಿರ್ ಶಮೀರ್ (ಕವಾಲಿ)
೩ ನೌಫಲ್.ಅಮೀನ್ ಅರ್ಶಾದ್ (ಸೀರತ್)

2 ಆಲಡ್ಕ ಶಾಖೆ
        ಜೂನಿಯರ್
೧ ಸಫೀವುಲ್ಲಾ (ಚಿತ್ರ ರಚನೆ)
            ಸೀನಿಯರ್
೧ ಅಹ್ಮದ್ ಶಮೀಮ್ (ಇಂಗ್ಲೀಷ್ ಪ್ರಬಂಧ) 
೨ ಇಬ್ರಾಹಿಮ್ ಅಸ್ತರ್ (ಉರ್ದು ನಅತ್ ಕನ್ನಡ ಹಾಡು)
    ದಅ್ವಾ ಜೂನಿಯರ್
೧ ಅಲಿ ಅಝ್ಗರ್ (ಅನುವಾದ, ಸ್ವರಫ್)
೨ ಮುಹಮ್ಮದ್ ಹಫೀಝ್ (ಉರ್ದು ಬಾಷಣ)
೩ ಮುಹಮ್ಮದ್ ರಾಫಿ (ನಶೀದಃ)
೪ ಯೂಸುಫ್ ಹಫೀಝ್(ಇಂಗ್ಲೀಷ್ ಭಾಷಣ)
      ದಅ್ವಾ  ಸೀನಿಯರ್
೧  G m ಆರಿಫ್ (ಮಲಯಾಳಂ ವಾಳ್. ಆಶಯ ಮಂಡನೆ.ಬುರ್ದಾಹಿಫ್ಳ್.ಚರ್ಚಾಗೋಷ್ಟಿ.ಸ್ಪೋಟ್ ಮ್ಯಾಗಝಿನ್)
        ಜನರಲ್
೧ g.m ಆರಿಫ್ p.s ಇಬ್ರಾಹಿಂ ಶಮೀಮ್ (ಮೌಲಿದ್)
೨ ಅಸ್ತರ್. ರಾಶಿದ್.ಶಫೀವುಲ್ಲಾ.ಯೂಸುಫ್ ಹಫೀಝ್(ಸಂಘ ಹಾಡು)
3 ಕಾರಾಜೆ ಶಾಖೆ
        ಜೂನಿಯರ್
೧ ನಿಝಾಮುದ್ದೀನ್ (ಕ್ವಿಝ್)
      ಸೀನಿಯರ್
೧ ಮುಹಮ್ಮದ್ ಉವೈಸ್ (ಇಂಗ್ಲೀಷ್ ಭಾಷಣ.ಸಯನ್ಸ್ ಮೋಡಲ್)
     ದಅ್ವಾ  ಜೂನಿಯರ್
೧ ಹಿಬತುಲ್ಲಾ (ಅರಬಿ ಹಾಡು)
       ಜನರಲ್
೧ ಜೌಹರ್ ನಿಝಾಮ್ ಸಿನಾನ್ ಬಾತಿಷ್.ಹಿಬತುಲ್ಲಾ(ಬುರ್ದಾ)

4 ಬೊಳ್ಳಾಯಿ ಶಾಖೆ
        ಜೂನಿಯರ್
೧ ಸುಹೈಲ್ (ಕಿರಾಅತ್)
         ಸೀನಿಯರ್
೧ ತೌಸೀಲ್ (ದೇಶ ಭಕ್ತಿ ಗೀತೆ)
೨ ಝಮೀರ್(ಹಿಪ್ಳ್)
    ‌        ದಅ್ವಾ ಜೂನಿಯರ್
೧ ಶಕೀಲ್ (ಆಶಯ ಭಾಷಣ) 
          ದಅ್ವಾ ಸೀನಿಯರ್
೧ ಹನೀಫ್ (ಕನ್ನಡ ಪ್ರಬಂಧ. ಇಬಾರತ್ ವಾಚನ.ಸ್ಪೋಟ್ ಮ್ಯಾಗಝಿನ್)
       ಜನರಲ್
೧ ಝಮೀಲ್.ಶಕೂರ್ ಝಾಹಿರ್ (ಮಾಲೆ)
೨ ದಫ್ ತಂಡ

5 ಗೋಳಿಪಡ್ಪು ಶಾಖೆ
       ಜೂನಿಯರ್
೧ ಫಾಯಿಝ್ (ಹಿಫ್ಳ್)

6   ಮೆಲ್ಕಾರ್ ಶಾಖೆ
    ಜೂನಿಯರ್
೧ ಅಫೀಫ್ (ಬಕ್ ರೀಡಿಂಗ್)
೨ ರಾಝಿಕ್ (ಕನ್ನಡ ಭಾಷಣ)
೩ಮುನಿಶ್ (ಇಂಗ್ಲೀಷ್ ಭಾಷಣ)
       ದಅ್ವಾ ಸೀನಿಯರ್
೧ಸಪ್ವಾನ್(ಕಿತಾಬ್ ಟೆಸ್ಟ್)
       ಜನರಲ್ 
೧ಬಾತಿಸ್. ಮುಹೈಮಿನ್(ಇಶಾರ ಗ್ರೂಪ್ ಕ್ವಿಝ್)

  7 ಗೂಡಿನಬಳಿ ಶಾಖೆ 
       ಜೂನಿಯರ್
೧ ಮುಹಮ್ಮದ್ ರಾಫಿ(ಅರಬಿ ಕೈ ಬರಹ)
     ದಅ್ವಾ ಸೀನಿಯರ್
೧ ಹಾಫಿಝ್ ಅಹ್ಮದ್ ಯಹ್ಯಾ(ಅಲ್ಫಿಯಾ ಬೈತ್.ಅನುವಾದ)
    ಜನರಲ್
೧ ಇಬ್ರಾಹಿಂ.. ಸಈದ g m(ಡಾಕ್ಯುಮೆಂಟರಿ)

8 ಸಜಿಪ ಶಾಖೆ
   ಸೀನಿಯರ್
೧ ನಾಸಿರ್ (ಕ್ವಿಝ್.ಕ್ಯಾಪ್ಷನ್ ರೈಟಿಂಗ್. ಕವನ ವಾಚನ)
     ದಅ್ವಾ ಸೀನಿಯರ್
೧ ಲತೀಫ್ (ಕ್ವಿಝ್.ಅಶು ಭಾಷಣ.ಸ್ಪೋಟ್ ಮ್ಯಾಗಝಿನ್)

 9 ಸುಭಾಶ್ ನಗರ ಶಾಖೆ
        ಜೂನಿಯರ್
೧ ನೌಶಾದ್ (ಕನ್ನಡ ಹಾಡು. ಮೊಮರಿ ಟೆಸ್ಟ್. ಉರ್ದು ನಅತ್ )

10 ನಂದಾವರ ಶಾಖೆ
      ಸೀನಿಯರ್
೧ ಮುಹಮ್ಮದ್ ಫಾಮಿದ್(ಕಿರಾಅತ್ .ಕನ್ನಡ ಪ್ರಬಂಧ)

11 ಚಟ್ಟೆಕಲ್ಲು ಶಾಖೆ 
        ದಅ್ವಾ ಸೀನಿಯರ್
೧ ಸಫೀಕ್ (ಮುಶಾವರ)

ಎಲ್ಲಾ ಸ್ಪರ್ಧಾಥಿಗಳು 24/12/2017 ರಂದು ಆದಿತ್ಯವಾರ ಬೆಳಿಗ್ಗೆ 8:00 ಗಂಟೆಗೆ ಸರಿಯಾಗಿ ಸ್ಪರ್ಶ ಹಾಲ್ ಬಿಸಿರೋಡ್ ಗೆ ಬಂದು ಸಹಕರಿಸಿರಿ

Popular Posts

Blog Archive