SSFಇಹ್ಸಾನ್ ಕರ್ನಾಟಕ ಬೂದುಗುಪ್ಪ ಎಂಬ ಹಳ್ಳಿಯಲ್ಲಿರುವ ದಾರುಲ್ ಇಹ್ಸಾನ್ ಸೆಂಟರ್ ಬಗ್ಗೆ ಒಂದಿಷ್ಟು.
ಕರ್ನಾಟಕ ಕಲ್ಚರಲ್ ಫೌಂಡೇಶನ್(KCF)ನ ಸಂಪೂರ್ಣ ಸಹಕಾರದೊಂದಿಗೆ
ಕಾರ್ಯಾಚರಿಸುತ್ತಿರುವ SSFಇಹ್ಸಾನ್ ಕರ್ನಾಟಕ
ಬೂದುಗುಪ್ಪ ಎಂಬ ಹಳ್ಳಿಯಲ್ಲಿರುವ ದಾರುಲ್ ಇಹ್ಸಾನ್ ಸೆಂಟರ್ ಬಗ್ಗೆ ಒಂದಿಷ್ಟು.
✍🏻ಹಾರಿಸ್ ಪೆರಿಯಪಾದೆ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬೂದುಗುಪ್ಪ ಎಂಬ ಪ್ರದೇಶದಲ್ಲಿರುವ ಬಗ್ಗೆ ದಾರುಲ್ ಇಹ್ಸಾನ್ ಸೆಂಟರ್ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಈ ವರ್ಷದ ರಮಳಾನಿನಲ್ಲಿ ಇಹ್ಸಾನ್ ದಾಇಯಾಗಿ ಆಗಮಿಸಿದ ಸಿನಾನ್ ಅಗ್ರಹಾರ ಇವರನ್ನು ನಾನು ಮತ್ತು ಜುನೈದ್ ಉಸ್ತಾದ್ ಅರಬಿಗುಡ್ಡೆ ಭೇಟಿಯಾದಾಗ ಅಲ್ಲಿನ ಬಗ್ಗೆ ತಿಳಿದ ಕೆಲವೊಂದು ವಿಷಯಗಳನ್ನು
ಬರೆದಿರುತ್ತೇನೆ. ಓದಿ ಇಹ್ಸಾನ್ ದಾಯಿಗಳಿಗೆ ಮತ್ತು ಸಂಪೂರ್ಣ ಸಹಕಾರ ನೀಡುವ ಕೆ.ಸಿ.ಎಫ್ ಕಾರ್ಯಕರ್ತರಿಗೆ ತಪ್ಪದೆ ದುವಾ ಮಾಡಿ.
2014 ರಲ್ಲಿ ಇಹ್ಸಾನ್ ಕರ್ನಾಟಕ ಸಮಿತಿಯ ವತಿಯಿಂದ ಉತ್ತರ ಕರ್ನಾಟಕದ ವಿವಿದ ಭಾಗಗಳಿಗೆ 15 ದಾಇಗಳನ್ನು ಕಳಿಸಲಾಯಿತು.














