Wednesday, 11 October 2017

ಸಮಸ್ತ ಮುಶಾವರ ಪಂಡಿತ ಸಭೆಯ ಮುತ್ತೊಂದು ಅಸ್ತಮಿಸಿತ್ತು..

ಸಮಸ್ತ ಮುಶಾವರ ಎಂಬ ಮಹಾ ಪಂಡಿತ ಸಭೆಯ ಸದಸ್ಯರು,ಪಾಲಕ್ಕಾಡ್ ಜಿಲ್ಲಾ ಸಂಯುಕ್ತ ಖಾಝಿಯಾದ ಶೈಖುನ ಕುಮರಂಪುತ್ತೂರು ಅಲಿ ಉಸ್ತಾದ್ ವಫಾತದ ವಾರ್ತೆ ಇಡೀ ಸುನ್ನೀ ಸಂಘ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.

ವಫಾತಿನ ಐದು ನಿಮಿಷದ ಮುಂಚೆ ಅಶಿಕ್ಕುರ್ರಸೂಲ್  ಡಾ.ಫಾರೂಕ್ ನಹೀಮಿ ಉಸ್ತಾದರ ಏಕದಿನ ಮತ ಪ್ರಭಾಷಣದ ಅಧ್ಯಕ್ಷತೆಯ ನೇತೃತ್ವವನ್ನು ವಹಿಸಿದ ಕುಮರಂಪುತ್ತೂರ್ ಅಲಿ ಉಸ್ತಾದರು ಡಾ.ಫಾರೂಕ್ ನಹೀಮಿ ಉಸ್ತಾದರು ಲೋಕ ನಾಯಕ ಪ್ರವಾದಿ ಮುಹಮ್ಮದ್ ಮುಸ್ತಾಫ(ಸ.ಅ)ರ ಹೆಸರನ್ನು ಹೇಳುವಾಗ ಉಸ್ತಾದ್ ತನ್ನ ಎರಡು ಕೈಯನ್ನು ಅಕಾಶದತ್ತ ಎತ್ತಿ ಪ್ರವಾದಿಯ ಹೆಸರಿಗೆ ಸ್ವಲಾತ್ ಹೇಳಿ ಅರ್ಧದಲ್ಲಿ ವೇದಿಕೆಯಿಂದ ಮನೆ ಕಡೆಗೆ ನಿರ್ಗಮಿಸಿದ ಉಸ್ತಾದರು ತಕ್ಷಣ ವಫತಾದರು.

ಸರ್ವ ಶಕ್ತನಾದ ಅಲ್ಲಾಹನೇ ಉಸ್ತಾದರ ಖಬುರನ್ನು ವಿಶಾಲಗೊಳಿಸು,ಉಸ್ತಾದರೊಡನೆ ನಮ್ಮನ್ನು ಸ್ವರ್ಗಿಯ ಲೋಕದಲ್ಲಿ ಒಂದುಗೂಡಿಸುವ ಸೌಭಾಗ್ಯವನ್ನು ಕರುಣಿಸು(ಅಮೀನ್)

✍ಇರ್ಫಾಝ್ ತುಂಬೆ

GRAND ULAMA CONFERENCE CLOSING CEREMONY

GRAND ULAMA CONFERENCE CLOSING CEREMONY @ UPPINANGADY ON 10-10-2017

ULAMA CONFERENCE @ UPPINANGADY ON 09-10-2017

*SELFIE-21 CAMP*

*ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ* 

*SELFIE-21 CAMP*

_ದಿನಾಂಕ :ಅಕ್ಟೋಬರ್ 22 ಆದಿತ್ಯವಾರ_

*ಸ್ಥಳ : ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಸಭಾಂಗಣ ಬಿಸಿರೋಡ್*

*ಸಮಯ: 1pm to 6pm*

*GUEST*
*ಹಂಝ ಮದನಿ ಮಿತ್ತೂರು*
*ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ*
*ಮುಹಮ್ಮದ್ ಅಲಿ ತುರ್ಕಳಿಕೆ*

*✍🏻 ಹಾರಿಸ್ ಪೆರಿಯಪಾದೆ*

ತುಂಬೆ ನಾಡನ್ನು ಧನ್ಯಗೊಳಿಸಿದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ತುಂಬೆಯ ಸುನ್ನೀ ಕಲ್ಚರಲ್ ಸೆಂಟರ್ ಭೇಟಿ.



ವಿಶ್ರಾಂತಿಯಿಲ್ಲದೇ ದೇಶದಿಂದ ದೇಶಕ್ಕೆ,ಪ್ರದೇಶದಿಂದ ಪ್ರದೇಶಕ್ಕೆ,ರಾಜ್ಯದಿಂದ ರಾಜ್ಯಕ್ಕೆ,ಸಮ್ಮೇಳನದಿಂದ ಸಮ್ಮೇಳನಕ್ಕೆ ಮುಂತಾದ ಹಲವಾರು ರೀತಿಯ ಧೀನಿ ಪ್ರಭೋದನೆಯ ಕಾರ್ಯಕ್ಕೆ ಒಂದು ನಿಮಿಷವು ವಿಶ್ರಾಂತಿಯಿಲ್ಲದೇ ಓಡಾಡುವ ಜಗತ್ತು ಕಂಡ ಓರ್ವ ಅದ್ಬುತ ವಿದ್ವಾಂಸ,ಜಾಗತಿಕ ಸುನ್ನೀ ಮುಸಲ್ಮಾನರ ಅನಿಷೇಧ್ಯ ನಾಯಕ,ಸಮಸ್ತದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದರ ತುಂಬೆ ಸುನ್ನೀ ಮಕ್ಕಳ ಅಸ್ಥಾನ ಕೇಂದ್ರವಾದ ಸುನ್ನೀ ಕಲ್ಚರಲ್ ಸೆಂಟರಿನ ಭೇಟಿಯು ಇತಿಹಾಸದ ಇನ್ನೊಂದು ಪುಟ ಸೇರಿದರೆ ತುಂಬೆಯ ಮಣ್ಣು ಉಸ್ತಾದರ ಪಾವನ ಪುಣ್ಯ ಕಾಲಿನ ಸ್ಪರ್ಶದಿಂದ ಪುಣಿಯುತಗೊಂಡು ಧನ್ಯಗೊಂಡವು,ತುಂಬೆಯ ಸುನ್ನೀ ಮಕ್ಕಳ ಪಾಲಿಗೆ ಎರಡನೇ ಪೆರ್ನಾಲ್ ಎಂದೇ ಸಂಭ್ರಮಪಟ್ಟುಗೊಂಡರೆ "ಮರುಭೂಮಿಯು ಬಿಸಿಲಿನ ತಾಪಕ್ಕೆ ಮರುಭೂಮಿಯ ಮಣ್ಣು ಒಂದು ಹನಿ ನೀರಿಗಾಗಿ ಚಟಪಡಿಸುವಾ ದ್ರಶ್ಯವಾದರೆ ತುಂಬೆಯ ಮಣ್ಣು ಉಸ್ತಾದರ ಪುಣ್ಯ ಕಾಲಿನ ಸ್ಪರ್ಷಕ್ಕಾಗಿ ದಾಹದಲ್ಲಿ ಮುಳುಗಿದಾಗ ಶೈಖುನ ಎ.ಪಿ ಉಸ್ತಾದರ ಕಾಲಿನ ಸ್ಪರ್ಷದಿಂದ ತುಂಬೆಯ ಮಣ್ಣಿನ ದಾಹ ಹಾಗು ಸುನ್ನೀ ಮಕ್ಕಳ ದಾಹವು ನೀಗಿದಾಗ ಸುನ್ನೀ ಮಕ್ಕಳು ತಕ್ಬೀರ್ ಮೊಳಗಿಸಿದರು".

ಉಪ್ಪಿನಂಗಡಿಯ ಐತಿಹಾಸಿಕ ಮೂರು ದಿನಗಳ ಬ್ರಹತ್ ಉಲಮಾ ಕಾನ್ಫರನ್ಸ್ ಕಾರ್ಯಕ್ರಮದ ಮೂರನೇ ದಿನದ ಸಮರೂಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಯಿಸಲು ಮಂಗಳೂರಿನಿಂದ ಉಪ್ಪಿನಂಗಡಿಗೆ ಹಾದುಹೋಗಬೇಕಾದರೆ ತುಂಬೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಧಾಟಿಹೋಗುವ ಸನ್ನಿಹಿತವನ್ನು ಅರಿತ ಜಾತಕ ಪಕ್ಷಿಯಂತೆ ಕಾದುಕುಳಿತ ತುಂಬೆಯ ಸುನ್ನೀ ಮಕ್ಕಳು ಒಂದುಕಡೆಯಾದರೆ ಇನ್ನೊಂದು ಕಡೆ ಎ.ಪಿ ಉಸ್ತಾದ್ ಪ್ರಸ್ತುತ ತುಂಬೆಯಲ್ಲಿ ವಾಸವಾಗಿರುವ ಉಮಾರ ನಾಯಕ ಕಣ್ಣೂರಿನ ಗೋಲ್ಡನ್ ಪುತ್ತಾಕರವರ ಮನೆಯಲ್ಲಿ ಮುಂಜಾನೆಯ ಉಪಹಾರವನ್ನು ಸೇವಿಸಿ ಬರುವ ಸಂದರ್ಭವನ್ನು ಮೊದಲೇ ಅರಿತ ತುಂಬೆಯ ಸುನ್ನೀ ಕಾರ್ಯಕರ್ತರ ಕಠಿಣ ಶ್ರಮದ ಫಲವಾಗಿ ಉಸ್ತಾದರು ಕೊನೆಗೂ ಪುಣ್ಯ ಕಾಲಿನ ಭಾಗವನ್ನು ತುಂಬೆಯ ಮಣ್ಣನ್ನು ಸ್ಪರ್ಶಿಸಿ ಕೆಲವೇ ಕೆಲವು ನಿಮಿಷದಲ್ಲಿ ದುವಾ: ನಡೆಸಿ ಉಸ್ತಾದರು ಹಿಂದುರಿಗಿ ಹೋದರೆ ಸುನ್ನೀ ಮಕ್ಕಳ ಆವೇಶವು ಸಂತೋಸದ ಸಂಭ್ರಮ ಮುಗಿಲುಮುಟ್ಟುತ್ತಿದವು ಹಾಗು ತುಂಬೆಯ ಚರಿತ್ರೆಯಲ್ಲಿ ಮಾಯದ ದಿನವಾಗಿ ಐತಿಹಾಸಿಕ ದಿನವಾಗಿ ಮಾರ್ಪಟ್ಟಿತು(ಅಲ್-ಅಮ್ದುಲಿಲ್ಲಾ)

ಎರಡನೇ ವರ್ಷ ಪೂರ್ತಿಗೊಳಿಸುವ ಸಂಭ್ರಮದಲ್ಲಿರುವ ತುಂಬೆಯ ಸುನ್ನೀ ಕಲ್ಚರಲ್ ಸೆಂಟರ್ ಎಂಬ ಹದಿಹರೆಯಾದ ಕೂಸು ನಿಜಕ್ಕೂ ಇಪ್ಪತ್ತು ವರ್ಷದ ಯುವಕನಂತೆ ಹೆಮ್ಮರವಾಗಿ ತುಂಬೆಯ ನಾಡಿನಲ್ಲಿ ಸುನ್ನಿಗಳ ಆಸ್ಥಾನವಾಗಿ ಬೆಳೆದು ನಿಂತಿದೆ(ಮಾಷ ಅಲ್ಲಾ).
ಶೈಖುನ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರನ್ನು ತುಂಬೆಗೆ ಕರೆಸಿಕೊಳ್ಳಬೇಕೆಂದು SSF ತುಂಬೆ ಕಾರ್ಯಕರ್ತರು ಕಾಣುತ್ತಿದ ಕನಸು ನಿಜಕ್ಕೂ ಅರ್ಧದಷ್ಟು ಪೂರ್ತಿಯಾಯಿತು.

ಉಸ್ತಾದರನ್ನು ಒಂದು ಯಾವುದೇ ಕಾರ್ಯಕ್ರಮಕ್ಕೂ ಕರೆಸಿಕೊಳ್ಳುವುದು ಸುಲಭದ ಮಾತಲ್ಲ ಅದು ಅದೆಷ್ಟೋ ವರ್ಷಗಳ ಹಿಂದೆಯೇ ಉಸ್ತಾದರ ಬರುಯುವಿಕೆಯನ್ನು ಖಾಯಂಗೊಳಿಸಬೇಕು ಅದರಲ್ಲೂ ಉಸ್ತಾದ್ ವಿದೇಶದಲ್ಲಿ ಅಥವಾ ಯಾವುದೇ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಯಿಸಿದರೆ ಉಸ್ತಾದರಿಗೆ ಇನ್ನಿತರ ಖಾಯಂಗೊಳಿಸಿದ ಕಾರ್ಯಕ್ರಮಕ್ಕೆ ಭಾಗವಯಿಸಲು ಸಾದ್ಯವಾಗುವುದ್ದಿಲ್ಲ ವಯಸ್ಸು 80 ದಾಟಿದರು ಸರ್ವ ಶಕ್ತನಾದ ಅಲ್ಲಾಹನ ದಿವ್ಯ ಅನುಗ್ರಹದಿಂದ ಒಂದು ನಿಮಿಸವು ವಿಶ್ರಾಂತಿಯಿಲ್ಲದೇ ಓಡಾಡುವ ಓರ್ವ ಮಹಾ ಚೇತನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಅಲ್ಲದೇ ಜಗತ್ತಿನಲ್ಲಿ ಇನ್ಯಾರನ್ನು ಕಾಣಲು ಸಾದ್ಯವಾಗುವುದಿಲ್ಲ.

ಅಕಸ್ಮಿಕ ಉಸ್ತಾದರ ತುಂಬೆಯ ಭೇಟಿಯಿಂದ ತುಂಬೆ ನಾಡು ಧನ್ಯಗೊಂಡಿತು ಇನ್ಶ ಅಲ್ಲಾ ಒಂದು ಸುನ್ನೀ ಮಹಾ ಸಮ್ಮೇಲ್ಲನದ ಮೂಲಕ ತುಂಬೆಯಲ್ಲಿ ಜನಸಾಗರದ ನಡುವೆ ಉಸ್ತಾದರ ಮುಖ್ಯ ಪ್ರಭಾಷಣ ಸರ್ವಶಕ್ತನಾದ ಅಲ್ಲಾಹಾನ ದಿವ್ಯ ಅನುಗ್ರಹದೊಂದಿಗೆ ನಡೆಯಬೇಕೆಂಬ ಅಭಿಲಾಸೆಯೂ ನಮ್ಮಲ್ಲಿದೆ ಅಲ್ಲಾಹಾನು ಪೂರ್ತಿಗೊಳಿಸಲಿ (ಅಮೀನ್).

ಸರ್ವ ಶಕ್ತನಾದ ಅಲ್ಲಾಹನು ಶೈಖುನ ಸುಲ್ತಾನುಲ್ ಉಲಮಾರಿಗೆ ದೀರ್ಘ ಅರೋಗ್ಯ ಅಯುಷ್ಯವನ್ನು ದಯಪಾಲಿಸಲಿ,ಉಸ್ತಾದರ ನೆರಳಿನಲ್ಲಿ ಜೀವಿಸಲು ಸರ್ವಶಕ್ತನಾದ ಅಲ್ಲಾಹನು ನಮಗೆಲ್ಲರಿಗೂ ಸೌಭಾಗ್ಯ ನೀಡಿ ದಯಾಪಾಲಿಸಲಿ(ಅಮೀನ್ ಯಾರಬ್ಬಲ್ ಅಲಾಮೀನ್)

====================
✍ಇರ್ಫಾಝ್ ತುಂಬೆ
====================

kasmir ssf student campaign against drug

ಸಮಸ್ತ ಕೇರಳ ಜಂಇಂಯ್ಯತುಲ್ ಉಲಮಾ 40 ಮುಶಾವರು ಸದಸ್ಯರು




1. ಶೈಖುನಾ ಇ ಸುಲೈಮಾನ್ ಮುಸ್ಲಿಯಾರ್ ಓದುಕ್ಕುಂಙಳ್

ಜನನ:-1942
ಜಿಲ್ಲೆ:-ಮಲಪ್ಪುರಂ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್ˌಕೆ.ಕೆ ಅಬೂಬಕರ್ ಹಝ್ರತ್ 
ಬಿರುದು:ಖಾಸಿಮಿ
ಗೌರವನಾಮ:ರಯೀಸುಲ್ ಉಲಮಾ
ಕಲಿಕೆ:9ವರ್ಷ
ಸೇವೆ:ಇಹ್ಯಾವುಸ್ಸುನ್ನ ಶರೀಅತ್ತ್ ಕಾಲೇಜ್ ಮಲಪ್ಪುರಂ

2. ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ

ಜನನ:-1939
ಜಿಲ್ಲೆ:-ಕೋಝಿಕ್ಕೋಡ್ 
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್ˌಕೆ.ಕೆ ಅಬೂಬಕರ್ ಹಝ್ರತ್ 
ಬಿರುದು: ಬಾಖವಿ
ಗೌರವನಾಮ:ಖಮರುಲ್ ಉಲಮಾ ˌಸುಲ್ತಾನುಲ್ ಉಲಮಾˌಅಬುಲ್ ಹೈತಾಮ್
ಸೇವೆ: ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

3. ಶೈಖುನಾ ಚಿತ್ತಾರಿ ಹಂಝ ಮುಸ್ಲಿಯಾರ್

ಜನನ:-1939
ಜಿಲ್ಲೆ:ಕಣ್ಣೂರ್
ಪ್ರಧಾನ ಗುರುವರ್ಯರು:ಕಣ್ಣಿಯತ್ ಮುಹಮ್ಮದ್ ಮುಸ್ಲಿಯಾರ್ 
ಬಿರುದು: ಖಾಸಿಮಿ
ಗೌರವನಾಮ:ಕಂಝುಲ್ ಉಲಮಾ
ಸೇವೆ:ಅಲ್ ಮಕರ್ ಶರೀಅತ್ ಕಾಲೇಜ್ ಕಣ್ಣೂರ್

4. ಶೈಖುನಾ ಅಲಿಕುಂಞ ಮುಸ್ಲಿಯಾರ್ ಶಿರಿಯಾ

ಜನನ:-1935
ಜಿಲ್ಲೆ:ಕಾಸರಗೋಡ್
ಪ್ರಧಾನ ಗುರುವರ್ಯರು:ಕೊಟುಮಲ ಅಬೂಬಕರ್ ಮುಸ್ಲಿಯಾರ್ 
ಬಿರುದು: ಖಾಸಿಮಿ
ಗೌರವನಾಮ:ತಾಜುಶ್ಶರೀಅ
ಕಲಿಕೆ:15ವರ್ಷ

5. ಸಯ್ಯಿದ್ ಅಲೀ ಬಾಫಖಿ ತಂಙಳ್

ಜಿಲ್ಲೆ:ಕೋಝಿಕ್ಕೋಡ್
ಪ್ರಧಾನ ಗುರುವರ್ಯರು:ಸಂಶುಲ್ ಉಲಮಾˌ:ಕೊಟುಮಲ ಅಬೂಬಕರ್ ಮುಸ್ಲಿಯಾರ್ 
ಬಿರುದು: ಫೈಝಿ
ಕಲಿಕೆ:13 ವರ್ಷ

6. ಶೈಖುನಾ ಕೋಟೂರ್ ಕುಂಞಹ್ಮದ್ ಮುಸ್ಲಿಯಾರ್

ಜನನ:-1941
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್
ಕಲಿಕೆ:7ವರ್ಷ
ಸೇವೆ: ಸಿ.ಎಂ.ಮರ್ಕಝ್ ತೆನ್ನಲ ಮಲಪ್ಪುರಂ

7. ಹೈದ್ರೊಸ್ ಮುಸ್ಲಿಯಾರ್ ಕೊಲ್ಲಂ

ಜನನ:-1938
ಜಿಲ್ಲೆ:ಕೊಲ್ಲಂ
ಪ್ರಧಾನ ಗುರುವರ್ಯರು:ಕೋಕುರ್ ಕುಂಞಹ್ಮಮದ್ ಮುಸ್ಲಿಯಾರ್ˌ ಕೆ.ಸಿ ಜಲಾಲುದ್ದೀನ್ ಮುಸ್ಲಿಯಾರ್ 
ಬಿರುದು: ಫೈಝಿ
ಸೇವೆ: ಖಾದಿಸಿಯ್ಯಾ ಕೊಲ್ಲಂ

8. ಎ.ಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಫಾರೊಕ್

ಜನನ:-1942
ಜಿಲ್ಲೆ:ಕೊಝೀಕ್ಕೋಡ್
ಪ್ರಧಾನ ಗುರುವರ್ಯರು::ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್
ಬಿರುದು: ಫೈಝಿ
ಗೌರವನಾಮ:ನಿಬ್ರಾಝುಲ್ ಉಲಮಾ 
ಸೇವೆ: ಸಅದಿಯ್ಯಾ ಕಾಸರಗೋಡ್ 

9. ಕೊಡಂಬುಝ ಬಾವ ಮುಸ್ಲಿಯಾರ್

ಜನನ:-1946
ಜಿಲ್ಲೆ:ಕೊಝಿಕ್ಕೋಡ್ 
ಪ್ರಧಾನ ಗುರುವರ್ಯರು:ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್ 
ಸೇವೆ: ದಾರುಲ್ ಮಆರಿಫ್ ಕೊಡಂಬುಝ

10. ಮಂಞಪ್ಪಟ್ಟ ಹಂಝ ಮುಸ್ಲಿಯಾರ್

ಜನನ:-1956
ಜಿಲ್ಲೆ:  ಮಲಪ್ಪುರಂ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್
ಬಿರುದು: ಬಾಖವಿ
ಕಲಿಕೆ:14 ವರ್ಷ

11. ಎ.ಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ

ಜನನ:-1950
ಜಿಲ್ಲೆ:ಕೊಝಿಕ್ಕೋಡ್ 
ಪ್ರಧಾನ ಗುರುವರ್ಯರು:ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಬಿರುದು: ಬಾಖವಿ
ಕಲಿಕೆ:15ವರ್ಷ
ಸೇವೆ: ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

12. ಸಯ್ಯಿದ್ ಇಬ್ರಾಹೀಂ ಖಲೀಲ್ ತಂಙಳ್ ಕಡಲುಂಡಿ

ಜನನ:-1964
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಬಿರಾನ್ ಕೋಯ ಮುಸ್ಲಿಯಾರ್
ಬಿರುದು: ಬಾಖವಿ
ಸೇವೆ: ಮಱ್ ದಿನ್ 

13. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ

ಜನನ:-1959
ಜಿಲ್ಲೆ:ಕೊಝಿಕ್ಕೋಡ್ 
ಪ್ರಧಾನ ಗುರುವರ್ಯರು: ಅಬ್ದುಲ್ ಖಾದಿರ್ ಮುಸ್ಲಿಯಾರ್ ಪುಲ್ಲುಕೆರೆ ˌಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಬಿರುದು:ಸಖಾಫಿ
ಸೇವೆ: ಸಿರಾಜುಲ್ ಹುದಾ 
ಕುಟ್ಯಾಡಿ

14. ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್

ಜನನ:-1954
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಶೈಖುನಾ ಕೋಟೂರ್ ಕುಂಞಹ್ಮದ್ ಮುಸ್ಲಿಯಾರ್ 
ಬಿರುದು:ಖಾಸಿಮಿ
ಗೌರವ ನಾಮ:ಮುಹಿಸ್ಸುನ್ನ
ಸೇವೆ:ಜಾಮಿಯ ಹಿಕಮಿಯ್ಯಾ ಮಂಜೇರಿ

15. ಪೊನ್ಮಳ ಮುಹಿದ್ದೀನ್ ಕುಟ್ಟಿ ಬಾಖವಿ

ಜನನ:1957
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು::ಶೈಖುನಾ ಕೋಟೂರ್ ಕುಂಞಹ್ಮದ್ ಮುಸ್ಲಿಯ
ಬಿರುದು: ಬಾಖವಿ
ಸೇವೆ:ಅಜ್ಮೀರ್ ಗೇಟ್ ರಾಮನಾಟುಕರ

16. ಸಿ.ಮುಹಮ್ಮದ್ ಫೈಝಿ

ಜನನ:-1955
ಜಿಲ್ಲೆ:ಕೊಝಿಕ್ಕೋಡ್ 
ಪ್ರಧಾನ ಗುರುವರ್ಯರು:ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಬಿರುದು: ಫೈಝಿˌಅಝ್ಹರಿ(ಈಜೀಪ್ಟ್ )BA in arabic and urdu (calicut)
ಸೇವೆ: ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

17. ಡಾ/ಹುಸೈನ್ ಸಖಾಫಿ ಚುಳ್ಳೀಕೋಡ್

ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂˌ ನೆಲ್ಲಿಕುತ್ತ್ ಇಸ್ಮಾಯಿಲ್ ಮುಸ್ಲಿಯಾರ್
ಬಿರುದು:ಸಖಾಫಿ ˌಅಝ್ಹರಿ(ಈಜೀಪ್ಟ್ )BA MA (calicut)JRF net PHD advocate
ಸೇವೆ:ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

18. ಹಸನ್ ಮುಸ್ಲಿಯಾರ್ ವಯನಾಡ್

ಜನನ:-1946
ಜಿಲ್ಲೆ:ವಯನಾಡ್ 
ಬಿರುದು:ಬಾಖವಿ
ಪ್ರಧಾನ ಗುರುವರ್ಯರು:ಕಿಡಂಙಾಯಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ 
ಸೇವೆ:ವೆಳ್ಳಮುಂಡ

19. ಅಬ್ದು ಮುಸ್ಲಿಯಾರ್ ತಾನಾಳೂರ್

ಜನನ:-1957
ಜಿಲ್ಲೆ:ಮಲಪ್ಪುರಂ
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಆನಕ್ಕರ ಕೋಯಕುಟ್ಟಿ ಮುಸ್ಲಿಯಾರ್

20. ಕೆ.ಕೆ ಅಹ್ಮದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪ್ಪಾರ

ಜನನ:-1945
ಜಿಲ್ಲೆ:ಕೊಝಿಕ್ಕೋಡ್
ಬಿರುದು:ಬಾಖವಿ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್ˌಇ.ಕೆ ಹಸನ್ ಮುಸ್ಲಿಯಾರ್ 
ಸೇವೆ:ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

21. ತಾಝಪ್ರ ಮುಹ್ಯಿದ್ದೀನ್ ಕುಟ್ಟಿ  ಮುಸ್ಲಿಯಾರ್ 

ಜನನ:-1957
ಜಿಲ್ಲೆ:ತ್ರಿಶೂರ್ 
ಪ್ರಧಾನ ಗುರುವರ್ಯರು:ಮಾರಾಯಮಂಗಳಂ ಕುಂಞ ಮುಹಮ್ಮದ್ ಮುಸ್ಲಿಯಾರ್
ಸೇವೆ:ದಾರುಲ್ ಇರ್ಷಾದಿಯಾ ಇಸ್ಲಾಮಿಯಾ

22. ಕೆ.ಪಿ ಮುಹಮ್ಮದ್ ಮುಸ್ಲಿಯಾರ್ ಕೊಂಬಂ

ಜನನ:-1947
ಜಿಲ್ಲೆ:ಪಾಲಕ್ಕಾಡ್ 
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಕುಮರಂಬತ್ತೂರ್  ಅಬ್ದುರ್ರಹ್ಮಾನ್ ಮುಸ್ಲಿಯಾರ್ 
ಸೇವೆ:ಹಸನಿಯ್ಯಾ ಪಾಲಕ್ಕಾಡ್ 

23. ಎನ್.ಅಲೀ  ಮುಸ್ಲಿಯಾರ್ ಕುಮರಂಬತ್ತೂರ್

ಜನನ:-1943
ಜಿಲ್ಲೆ:ಪಾಲಕ್ಕಾಡ್ 
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಕುಟ್ಟಿ ಹಸನ್ ಮುಸ್ಲಿಯಾರ್ 

24. ಅಬೂಬಕರ್ ಮುಸ್ಲಿಯಾರ್ ವೆಂಬನಾಡ್ 

ಜನನ:-1936
ಜಿಲ್ಲೆ:ತ್ರಿಶೂರ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಕಲ್ಲೂರ್ ಅಬೂಬಕರ್ ಮುಸ್ಲಿಯಾರ್ˌ  ಕೊಟುಮಲ ಅಬೂಬಕರ್ ಮುಸ್ಲಿಯಾರ್ 

25. ವಾಳಕುಳಂ ಬಿರಾನ್ ಕುಟ್ಟಿ ಮುಸ್ಲಿಯಾರ್

ಜನನ:-1939
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಕೈಪಟ್ಟ ಬಿರಾನ್ ಕುಟ್ಟಿ ಮುಸ್ಲಿಯಾರ್ 

26. ಸಯ್ಯಿದ್ ಳಿಯಾವುಲ್ ಮುಸ್ತಫ ತಂಙಳ್ ಮಾಟೂಲ್

ಜನನ:-1950
ಜಿಲ್ಲೆ:ಕಣ್ಣೂರ್ 
ಬಿರುದು:ಮದನಿ
ಪ್ರಧಾನ ಗುರುವರ್ಯರು:ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ

27. ಮುಖ್ತಾರ್  ಹಝ್ರತ್

ಜನನ:-1970
ಜಿಲ್ಲೆ:ಪಾಲಕ್ಕಾಡ್ 
ಬಿರುದು:ಬಾಖವಿ 
ಪ್ರಧಾನ ಗುರುವರ್ಯರು:ಅಮಾನುಲ್ಲಾ ಹಝ್ರತ್ ಕಮಾಲುದ್ದೀನ್
ಸೇವೆ: :ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

28. ಮುಹಮ್ಮದಲೀ ಸಖಾಫಿ ತ್ರಿಕರಿಪುರ್

ಜನನ:-1964
ಜಿಲ್ಲೆ:ಕಾಸರಗೋಡ್
ಬಿರುದು:ಸಖಾಫಿ
ಪ್ರಧಾನ ಗುರುವರ್ಯರು::ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂˌ ಇಂಬಿಚ್ಚಾಲಿ ಮುಸ್ಲಿಯಾರ್
ಸೇವೆ:ಜಾಮಿಯಾ ಸಅದಿಯಾ ಕಾಸರಗೋಡ್ 

29. ಇಝ್ಝುದ್ದೀನ್ ಕಾಮಿಲ್ ಸಖಾಫಿ ಕೊಲ್ಲಂ

ಜನನ:-1965
ಜಿಲ್ಲೆ:ಕೊಲ್ಲಂ
ಬಿರುದು:ಸಖಾಫಿ
ಪ್ರಧಾನ ಗುರುವರ್ಯರು:ಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ˌಹೈದ್ರೋಸ್ ಮುಸ್ಲಿಯಾರ್ ಕೊಲ್ಲಂ  ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂˌ
ಸೇವೆ:ಪಾರಿಪಲ್ಲಿ ಮಸ್ಜಿದ್ 

30. ಅಬೂ ಹನೀಫಲ್ ಫೈಝಿ ತೆನ್ನಲ

ಜನನ:-1950
ಜಿಲ್ಲೆ:ಮಲಪ್ಪುರಂ
ಬಿರುದು:ಫೈಝಿ 
ಪ್ರಧಾನ ಗುರುವರ್ಯರು:ಶುಜಾಯಿ ಮುಹಮ್ಮದ್ ಮುಸ್ಲಿಯಾರ್ ಅಬ್ದುರ್ರಹ್ಮಾನ್ ಮುಸ್ಲಿಯಾರ್
ಸೇವೆ:ಬುಖಾರಿ ಕ್ಯಾಂಪಸ್ ಕೊಂಡೋಟಿ

31. ಬೇಕಲ್ ಇಬ್ರಾಹೀಂ ಮುಸ್ಲಿಯಾರ್

ಜನನ:1947
ಜಿಲ್ಲೆ: ಕಾಸರಗೋಡ್ 
ಬಿರುದು:ಖಾಸಿಮಿ
ಪ್ರಧಾನ ಗುರುವರ್ಯರು:ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿˌಅಲಿ ಕುಂಞ ಮುಸ್ಲಿಯಾರ್
ಸೇವೆ:ಜಾಮಿಯಾ ಸಅದಿಯಾ ಕಾಸರಗೋಡ್ 

32. ವಿ.ಪಿ.ಎಂ ಫೈಝಿ ವಿಳ್ಯಾಪಳ್ಳಿ

ಜನನ:1943
ಜಿಲ್ಲೆ: ಕೊಝಿಕ್ಕೋಡ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಪಾರಕ್ಕಡವ್ ಞಾರಂಡಿ ಮುಸ್ಲಿಯಾರ್ˌಪಾರಕ್ಕಡವ್ ತೈಕಂಡಿ ಮುಸ್ಲಿಯಾರ್
ಸೇವೆ:ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

33. ಮಂಜನಾಡಿ ಪಿ.ಎಂ ಅಬ್ಬಾಸ್ ಮುಸ್ಲಿಯಾರ್

ಜನನ:1946
ಜಿಲ್ಲೆ: ಕೊಡಗು
ಬಿರುದು:ಖಾಸಿಮಿ
ಪ್ರಧಾನ ಗುರುವರ್ಯರು:ಕೊಂಡಗೇರಿ ಅಬ್ದುಲ್ಲ ಮುಸ್ಲಿಯಾರ್ ˌಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ
ಸೇವೆ:ಅಲ್ ಮದೀನ ಮಂಜನಾಡಿ 

34.  ಮಾರಾಯಾಮಂಗಳಂ ಅಬ್ದುರ್ರಹ್ಮಾನ್ ಫೈಝಿ 

ಜನನ:1956
ಜಿಲ್ಲೆ: ಪಾಲಕ್ಕಾಡ್ 
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಇ.ಕೆ ಹಸನ್ ಮುಸ್ಲಿಯಾರ್ 
ಸೇವೆ:ಜಾಮಿಯಾ ಹಸನಿಯ್ಯಾ

35 . ವಂಡೂರ್ ಅಬ್ದುರ್ರಹ್ಮಾನ್ ಫೈಝಿ

36. ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್

37. ಅಬ್ದುಲ್ ಜಲೀಲ್ ಸಖಾಫಿ ಚೆರುಶ್ಶೋಲ

38. ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಕೂರತ್

39. ಅಬ್ದುಲ್ ಅಝೀಝ್ ಸಖಾಫಿ ವೆಳ್ಳಯೂರ್

40. ಎಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ವಯನಾಡ್

✍🏻 — ಮುಹಮ್ಮದ್ ಆರೀಫ್ ಪುಂಜಾಲಕಟ್ಟೆ 
muhammadarifma403276@gmail.com

ದಕ್ಶಿಣ ಕನ್ನಡ ದಲ್ಲಿ ಹುಟ್ಟುವ ಮಕ್ಕಳು ಭಾಗ್ಯಶಾಲಿಗಳು

ದಕ್ಶಿಣ ಕನ್ನಡ ದಲ್ಲಿ ಹುಟ್ಟುವ ಮಕ್ಕಳು ಭಾಗ್ಯಶಾಲಿಗಳು ಕಾರಣ ಇಲ್ಲಿ ಹುಟ್ಟುವ ಮಕ್ಕಳು ನಾಲ್ಕು ವಿವಿಧ ಭಾಷೆಗಳನ್ನು ಕಲಿತು ಬೆಳೆಯುತ್ತಾರೆ ಕನ್ನಡ ತುಳು ಬ್ಯಾರಿ ಮತ್ತು ಮಲಯಳಮ್..  ಬ್ಯಾರಿ ಅಂದರೆ ಬಹ್ರೀ ಎಂದಾಗಿದೆ ಅದರ ಅರ್ಥ.. ಬಹ್ರ್ ಅಂದರೆ ಅರಬಿ ಭಾಷೆಯಲ್ಲಿ ಕಡಲು ಎಂದರ್ಥ.. ನಾವೆಲ್ಲ ಕರಾವಳಿ ಪ್ರದೇಶದ ಮುಸ್ಲಿಮರದ್ದರಿಂದ ಅರಬಿಗಳು ನಮ್ಮನ್ನು ಬಹ್ರ್ ಪ್ರದೇಶದವರು ಎಂಬ ಅರ್ಥದಲ್ಲಿ ಬಹ್ರೀ ಎಂದು ಕರೆದರು.. ನಂತರ ಬಹ್ರೀ ಬ್ಯಾರಿ ಆಯ್ತು..

ನೂಹ್ ನಬಿ (ಅ)  ರವರ ಹಡಗು ಜೂದಿಯ್ಯ್ ಎಂಬ ಪರ್ವತದ ತುದಿಯಲ್ಲಿ ಬಂದು ನಿಂತಿತ್ತು.. ಎಂದು ಖುರಾನ್ ಹೇಳುತ್ತದೆ ಈ ಜೂದಿಯ್ಯ್ ಎಂಬುವುದು ಅರಬಿ ಭಾಷೆ ಅದನ್ನು ಭಾರತೀಯ ಭಾಷೆಯಲ್ಲಿ ಅಜೂದಿ.. ಅಜೋದ್ಯ..  ಕೊನೆಗೆ ಅದು ಅಯೋದ್ಯವಾಗಿದೆ.. ಅಂದರೆ ಆ ಹಡಗು ಭಾರತದ ಅಯೋದ್ಯಯಲ್ಲಿ ಬಂದು ನಿಂತಿತು ಎಂದು ಕೆಲವು ಇಮಾಮ್ ಗಳು ಅಬಿಪ್ರಾಯ ಪಟ್ಟಿದ್ದಾರೆ..  ಅಂದರೆ ಬಲು ಪುರಾತನ ಕಾಲದಿಂದಲೂ ಭಾರತದಲ್ಲಿ ಇಸ್ಲಾಮ್ ಇತ್ತು  ಎಂಬುವುದಕ್ಕೆ ಸೂಚನೆಯಾಗಿದೆ ಇದೆಲ್ಲ..

ಎಂದು : ಹಕೀಮ್ ಅಝ್ಹರೀ
( ಏ. ಪಿ ಉಸ್ತಾದರ ಸುಪುತ್ರ)
ಉಪ್ಪಿನಂಗಡಿ ಉಲಾಮ ಕಾಂಫ್ರೆನ್ಸ್ ನಲ್ಲಿ  SmilGadiyara💚💚💚💚💚💚

ಕನ್ನಡ ಮಣ್ಣಿನಲ್ಲಿ ಹೊಸ ಅದ್ಯಾಯಕ್ಕೆನಾಂದಿ

ಸುಮಾರು 25 ವರ್ಷಗಳ ಹಿಂದೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ವಿಷಯವಾಗಿತ್ತು  ಕರ್ನಾಟಕದ ಮಣ್ಣಿನಲ್ಲಿ ಇಂತಹ ಅತ್ಯಂತ ಶಿಸ್ತುಬಧ್ದವಾದ ಒಂದು ಉಲಮಾ ಸಮಾವೇಶ.


ಸುಮಾರು 25 ವರ್ಷಗಳ ಹಿಂದೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ವಿಷಯವಾಗಿತ್ತು  ಕರ್ನಾಟಕದ ಮಣ್ಣಿನಲ್ಲಿ ಇಂತಹ ಅತ್ಯಂತ ಶಿಸ್ತುಬಧ್ದವಾದ ಒಂದು ಉಲಮಾ ಸಮಾವೇಶ.
         ಆದರೆ ಕನ್ನಡಿಗ ವಿಧ್ವಾಂಸರು ಈ ಚರಿತ್ರೆಯನ್ನು ಬದಲಿಸಿ ಉಪ್ಪಿನಂಗಡಿಯ ಹೃದಯಭಾಗದಲ್ಲಿ ಹೊಸದೊಂದು ಅಧ್ಯಾಯವನ್ನು ಬರೆದಿದ್ದಾರೆ.ಬಿಳಿವಸ್ತ್ರಧಾರಿ ವಿಧ್ವಾಂಸರಿಂದ ಬಿಳಿ ವರ್ಣಮಯಗೊಂಡಿದ್ದ ಉಪ್ಪಿನಂಗಡಿ ನಗರವು ಇಸ್ಲಾಮಿನಿಂದ ಶಾಂತಿಯನ್ನಲ್ಲದೆ ಬಯಸಲು ಸಾಧ್ಯವಿಲ್ಲ ಎಂಬ ಉದಾತ್ತ ಸಂದೇಶವನ್ನು ಸಾರುತ್ತಿತ್ತು.
      ಮೂರು ದಿನಗಳಲ್ಲಿ ನಡೆದ ಸಮಾವೇಶವು ಅತ್ಯಂತ ಶಿಸ್ತು ಬಧ್ಧವೂ ಯಶಸ್ವಿಯೂ ಆಗಿತ್ತು.
      ಕನ್ನಡಿಗ ಉಲಮಾ ದಿಗ್ಗಜರಾದ ಬೇಕಲ್ ಉಸ್ತಾದ್,ಅಬ್ಬಾಸ್ ಉಸ್ತಾದ್,ಮಾಣಿ ಉಸ್ತಾದ್ ಮುಂತಾದವರ ನಾಯಕತ್ವದಲ್ಲಿ ವಿಧ್ವಾಂಸರ ಒಂದು ಬಳಗದ ಅವಿಶ್ರಾಂತ ಕಾರ್ಯಾಚರಣೆಯ  ಫಲವಾಗಿತ್ತು ಈ ಯಶಸ್ಸು.
 ವಳವೂರು ಮುಹಮ್ಮದ್ ಸಅದಿ ಉಸ್ತಾದ್,ಯೂಸುಫ್ ಸಅದಿ ಉಸ್ತಾದ್,ಮುಹಮ್ಮದ್ ಅಲಿ ಫೈಝಿ ಉಸ್ತಾದ್,ತೋಕೆ ಉಸ್ತಾದ್,ಜಿ.ಎಮ್.ಉಸ್ತಾದ್,ಝೈನಿ ಉಸ್ತಾದ್,ಮೂಡಡ್ಕ ಸಖಾಫಿ,ಕೆಕೆಎಮ್ ಕಾಮಿಲ್ ಸಖಾಫಿ ಅಶ್ರಫ್ ಸಖಾಫಿ ಕಿನ್ಯ ಮುಂತಾದ ಅನೇಕರು ಈ ಬಳಗದಲ್ಲಿದ್ದರು. ಅಲ್ಲಾಹು ಅವರ ಶ್ರಮಗಳನ್ನು ಸ್ವೀಕರಿಸಲಿ ಆಮೀನ್.
🔹ಅವರ ಮ್ಯಾಜಿಕ್ ನಡೆದೇ ಬಿಟ್ಟಿತು🔹
             ಇಲ್ಲಿ ಒಬ್ಬರ ಮ್ಯಾಜಿಕ್ ಮೈಂಡ್ ತುಂಬಾ ಕೆಲಸ ಮಾಡಿದೆ. ತಿಂಗಳುಗಳ ಹಿಂದೆ ಮುಶಾವರದಲ್ಲಿ ಈ ಸಮಾವೇಶದ ಪ್ರಸ್ತಾಪ ಬಂದಾಗಲೇ ಅವರ ದೂರದೃಷ್ಠಿಯಿಂದ ಅವರು ವಿನೂತನ ವ್ಯವಸ್ತೆ ಬಗ್ಗೆ ಪ್ರಸ್ತಾಪಿಸಿದ್ದರು.ಆ ವ್ಯವಸ್ತೆಯನ್ನು ಜಾರಿಗೆ ತಂದಿರುವುದು ಈ ಸಮಾವೇಶದ ಯಶಸ್ವಿನಲ್ಲಿ ಮುಖ್ಯ ಪಾತ್ರ ವಹಿಸಿದೆ.ಅದ್ಯಾವುದೆಂದರೆ ಸುನ್ನೀ ರೇಂಜ್ ಮಟ್ಟದಲ್ಲಿ  ಝೋನಲ್ ಸಮಿತಿಗಳ ರಚನೆಯಾಗಿತ್ತು.ಇದು ಅತ್ಯಂತ ಯಶಸ್ಸೀ ಪ್ಲಾನ್ ಆಗಿತ್ತು.
        ಅವರ ಪ್ಲಾನ್ ಗಳೆಲ್ಲವೂ ಹೀಗೇ.ಯಶಸ್ಸಲ್ಲದೆ ಪರಾಭವಗೊಂಡದ್ದೇ ಇಲ್ಲ.
  ಎರಡು ವರ್ಷಗಳ ಹಿಂದೆ ನಡೆದ ಸುಲ್ತಾನುಲ್ ಉಲಮಾರ ಕರ್ನಾಟಕ ಯಾತ್ರೆಯಾಗಿರಬಹುದು.ಅದರ ಯಶಸ್ಸಿನಲ್ಲಿಯೂ ಇವರದೇ ಮುಖ್ಯ ಪಾತ್ರ. ಕರ್ನಾಟಕದ ಸಂಘಟನಾ ಬೆಳವಣಿಗೆಯಲ್ಲೂ ಇವರದೇ ಮಾಸ್ಟರ್ ಪ್ಲಾನ್ ಕೆಲಸಮಾಡಿದ್ದು. SSF,SYS,SJM,SMA,KMJC ಮುಂತಾದ ಎಲ್ಲಾ ಸಂಘಟಣೆಗಳಲ್ಲಿ ಇವರ ಪಾತ್ರ ಇದ್ದೇ ಇದೆ.
            ಇವರು ಬೇರೆ ಯಾರೂ ಅಲ್ಲ. ಮರ್ಕಝ್ನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಶೈಖುನಾ ಸುಲ್ತಾನುಲ್ ಉಲಮಾದ ಪುಣ್ಯನಾಲಗೆಯಿಂದ “ಅಬೂಹಾಮಿದ್“ಎಂಬ ಬಿರುದನ್ನು ಪಡೆದಿದ್ದ ಬಹು SP. ಹಂಝ ಸಖಾಫಿ ಬಂಟ್ವಾಳ ರವರಾಗಿರುತ್ತಾರೆ.ಅಲ್ಲಾಹು ದೀರ್ಘಾಯುಸ್ಸು ಆಫಿಯತನ್ನು ಕರುಣಿಸಲಿ ಆಮೀನ್.
ಇವರು ಶ್ರಮಜೀವಿ.ನಿಷ್ಕಳಂಕ,ನಿಸ್ವಾರ್ಥ,ನಿಷ್ಪಕ್ಷ ಹೃದಯದ ವಕ್ತಾರ. 1991-92 ರಅವಧಿಯಲ್ಲಿ ಮರ್ಕಝ್ ನಲ್ಲಿ ಮುತವ್ವಲ್ ವಿಧ್ಯಾರ್ಥಿ ಸಹಪಾಠಿಗಳಾಗಿದ್ದೆವು.ಆ ಸಮಯದಲ್ಲೇ ಕನ್ನಡಮಣ್ಣಿನಲ್ಲಿ ಸುನ್ನೀ ಸಂಘಟನೆ ಬಗ್ಗೆ ಅನೇಕ ಕನಸುಗಳನ್ನು ಕಾಣುತ್ತಿದ್ದರು.ಇಲ್ಲಿನ ಶೋಚನೀಯ ಅವಸ್ಥೆಗಳ ಬಗ್ಗೆ ಅರ್ಧ ರಾತ್ರಿಗಳ ತನಕ ನಿದ್ರಿಸದೆ ಮರ್ಕಝ್ ಶರೀಅತ್ ಕಾಲೇಜಿನ ವರಾಂಡಗಳಲ್ಲಿ ಕುಳಿತು ಚರ್ಚಿಸುತ್ತಿದ್ದುದುಂಟು.
      ಆ ಸಮಯದಲ್ಲೇ ಸಂಘಟಣಾ ರಂಗಕ್ಕೆ ದುಮುಕಿ ಕ್ರಾಂತಿಕಾರಿ ಚಟುವಟಿಕೆ ಗಳನ್ನು ಮಾಡುವ ಪ್ರಯತ್ನ ಮಾಡುತ್ತಿದ್ದರು. ಅಂದು ಅವರು ಕಾಣುತ್ತಿದ್ದ ಅನೇಕ ಕನಸುಗಳನ್ನು ನನಸು ಮಾಡುವುದರಲ್ಲಿ ಬಹುತೇಕ ಯಶಸ್ವಿಯಾಗಿರುತ್ತಾರೆಂಬುದರಲ್ಲಿ ಅನುಮಾನವೇ ಇಲ್ಲ.
     ಕರ್ನಾಟಕದ ಎಸ್ಸೆಸ್ಸಫ್ ನ ಪ್ರಾರಂಭ ಕಾಲದಲ್ಲಿ ಅಂದಿನ ಸಂಕೀರ್ಣ ಸಂಕಷ್ಟಮಯ ಸಮಯಗಳಲ್ಲಿಯೂ ನಿಸ್ವಾರ್ಥವಾಗಿ ದುಡಿದವರೂ ನಾಯಕತ್ವವನ್ನು ನೀಡಿದವರೂ ಆಗಿರುತ್ತಾರೆ.
        ವಿನೀತನಾದ ನಾನು ಎಸ್ಸೆಸ್ಸಫ್ ನ ರಾಜ್ಯಾಧ್ಯಕ್ಷ ನಾಗಿಯೂ GM ಉಸ್ತಾದರು ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಸಮಯ ಮಂಗಳೂರು ಬಂದರಿನಲ್ಲಿರುವ ಮಾಜಿ ಸಚಿವ ಸಿ.ಎಮ್ ಇಬ್ರಾಹೀಮ್ ರವರ ಕಾಂಪ್ಲೆಕ್ಸ್ ನಲ್ಲಿ ಕಚೇರಿಯನ್ನು ಪಡೆದಿದ್ದೆವು.
        ಕಾರ್ಯಕರ್ತರ ತೀವ್ರ ಅಭಾವವನ್ನು ಎದುರಿಸುತ್ತಿದ್ದ   ಅಂದು ಅನೇಕ ಕಡತಗಳನ್ನು ಬರೆದು ಮುಗಿಸಬೇಕಾಗಿತ್ತು.
ನಾನು ಕನ್ನಂಗಾರಿನಲ್ಲಿ ಮುದರ್ರಿಸ್ GM ಉಸ್ತಾದರು ಸೂರಿಂಜೆಯಲ್ಲಿ ಮುದರ್ರಿಸರಾದ್ದರಿಂದ ಆಫೀಸಿನಲ್ಲಿ ಕುಳಿತು ಕೆಲಸಮಾಡಲು ಆಸಾಧ್ಯವಾಗಿತ್ತು.
 ಅಂದು ಯಾವುದೇ ಉದ್ಯೋಗದಲ್ಲಿರದ SP ಉಸ್ತಾದರನ್ನು ಆಫೀಸಿನಲ್ಲಿ ಕುಳಿತು ಕೆಲಸಮಾಡಲು ಕೇಳಿಕೊಂಡಿದ್ದೆವು. ಅದನ್ನು ಒಪ್ಪಿಕೊಂಡು ಕಚೇರಿಯಲ್ಲಿಯೇ ಕುಳಿತು ರಾತ್ರಿ ಅಲ್ಲಿಯೇ ತಂಗಿ ಕೆಳಸಗಳನ್ನು ಮಾಡುತ್ತಿದ್ದರು.
   ಒಂದು ದಿನ ನಾನು ಮತ್ತು Gm ಉಸ್ತಾದರು ಕಚೇರಿಗೆ ಹೋದೆವು. ಸಮಯ ಮದ್ಯಾಹ್ನವಾಗಿತ್ತು. SP ಉಸ್ತಾದರು ಕಡತಗಳನ್ನು ಬರೆಯುತ್ತಾ ಇದ್ದರು. ನಾಷ್ಟ ಮಾಡಿದ್ದೀರಾ ಎಂದು ಕೇಳುವಾಗ ಇಲ್ಲ ಎಂದರು.
ಪರಿಶೀಲಿಸಿದಾಗ ಹಣವಿಲ್ಲದ ಕಾರಣ ನಾಷ್ಟ ಮಾಡಿಲ್ಲ ಎಂದು ತಿಳಿಯಿತು. ಆಗ ಕಚೇರಿಯಲ್ಲಿ ಬಾತ್ರೂಮ್ ಇಲ್ಲ.ಫ್ಯಾನ್ ಇಲ್ಲ.ನಾಷ್ಟನೂ ಮಾಡದೆ ಮಧೃದ್ಯಾಹ್ನದ ವರೆಗೆ ಕೆಲಸವನ್ನು ಮಾಡುತ್ತಿದ್ದರು. 
        ಇದು ಒಂದು ಸಣ್ಣ ಉದಾಹರಣೆ ಮಾತ್ರ.ಇಂತಹ ಅನೇಕ ಉದಾಹರಣೆಗಳನ್ನು ಅವರ ಸಂಘಟನಾ ಜೀವನದಲ್ಲಿ ಹಲವಾರು ಕಾಣಬಹುದು.
    ಆದುದರಿಂದ ಇವರು ನಮ್ಮ ಸುನ್ನೀ ಕರ್ನಾಟಕದ ಅಭಿಮಾನ.
ಅಲ್ಲಾಹುವೇ ಇವರಿಗೂ ನಮ್ಮ ಎಲ್ಲಾ ಉಲಮಾಗಳಿಗೂ ಇನ್ನಷ್ಟು ಹಿಮ್ಮತ್ತನ್ನು ನೀಡಿ ಅನುಗ್ರಹಿಸು.ಆಮೀನ್.
          ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ಣ

Popular Posts

Blog Archive