Showing posts with label ARTICLE. Show all posts
Showing posts with label ARTICLE. Show all posts

Thursday, 12 October 2017

#ವಾರಿಸ್_ಉಸ್ತಾದ್_ಹೇಗೆ_ಆರಂಭಿಸಲೆಂದು_ತಿಳಿಯುತ್ತಿಲ್ಲ

#ವಾರಿಸ್_ಉಸ್ತಾದ್_ಹೇಗೆ_ಆರಂಭಿಸಲೆಂದು_ತಿಳಿಯುತ್ತಿಲ್ಲ....ನಾನೇನೂ ನಿಮ್ಮ ಒಡನಾಡಿಯಲ್ಲ...ಅಣ್ಣನೋ ...ತಮ್ಮನೋ ...ಅಲ್ಲ...ಹೆಚ್ಚೇಕೆ ನನ್ನ ಜೀವನದಲ್ಲಿ ಒಮ್ಮೆಯೂ ತಮ್ಮನ್ನು ನಾನು ಮುಖತ ಕಂಡಿಲ್ಲ....
ಉಸ್ತಾದ್.....ಆದರೂ...ತಮ್ಮ ಮರಣವಾರ್ತೆ ತಿಳಿದಂದಿನಿಂದ ಮನವೇಕೋ ಮಿಡಿಯುತಿದೆ...ಕೇವಲ ಒಬ್ಬನದಲ್ಲ.....ನನ್ನಂತೆಯೇ ಮರಣದ. ಮೂಲಕ ತಮ್ಮಪರಿಚಯವಾದ ಹಲವರದು....
ವ್ಯಕ್ತಿಯೊಬ್ಬನ ಮಹತ್ವ ತಿಳಿಯಬೇಕೆಂದರೆ ಆತ ಮರಣಹೊಂದಬೇಕು ಎಂಬ ಮಹಾತ್ಮರುಗಳ ಮಾತು ತಮ್ಮ ಮರಣದ ಮೂಲಕ ದಿಟವಾಗುತ್ಥಿದೆ. ತನ್ನ ಮುಂದೆ ಹಾದುಹೋದ ಜನಾಝದ ಕುರಿತು ಸ್ವಹಾಬಿಗಳು ಮೆಚ್ಚುಗೆಯ ಮಾತನ್ನಾಡಿದಾಗ ಆತ ಸ್ವರ್ಗಸ್ಥನಾದ ಎಂಬ ಪ್ರವಾದಿಯವರ ಮಾತು ನೆನಪಾಗುತ್ತಿದೆ.ಯಾಕೆಂದರೆ ತಮ್ಮ ಮರಣವಾರ್ತೆ ತಿಳಿದಾಗಲೂ ಜನರ ಒಕ್ಕೊರೊಳಿನ ಮಾತು ತಮ್ಮ ಉತ್ತಮ ವ್ಯಕ್ತಿತ್ವದ ಕುರಿತಾಗಿತ್ತು.
ಕೆಲವರಿಗಷ್ಟೇ ಪರಿಚಿತವಾಗಿದ್ದ ನಿಮ್ಮ ಹೆಸರು ಮರಣದ ಮೂಲಕ ಎಲ್ಲರೂ ತಿಳಿಯುವಂತಾಯಿತು.ರಬ್ಬೇ ....ವಾರಿಸ್ ಉಸ್ತಾದರ ಪಾರತ್ರಿಕ ಜೀವನ ಪ್ರಕಾಶಯಮಗೊಳಿಸು ಎಂಬ ಪ್ರಾರ್ಥನೆ ಎಲ್ಲೆಡೆಯೂ ಅನುರಣಿಸಿತು.ಉಸ್ತಾದ್ ತಮ್ಮಂತಹ ಭಾಗ್ಯವಂತರು ಇನ್ನಾರಿದ್ದಾರೆ..?ತನ್ನ ಶಿಷ್ಯನ ಜನಾಝ ದರ್ಶನಕ್ಕಾಗಿ ಶೈಖುನಾ ಕಾಂತಪುರಂ ಉಸ್ತಾದರು ತನ್ನೆಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಸ್ವದೇಶಕ್ಕೆ ಮರಳಬೇಕಾದರೆ.......ತಂಙಳ್ ಉಸ್ತಾದರಿಗೆ ಇನ್ನೂ ಆ ವಾರ್ತೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲವೆಂದಾದರೆ.....ಹೆತ್ತಬ್ಬೆಯನ್ನು ಕಳೆದುಕೊಂಡಂತೆ ರೋಧಿಸುತ್ತಿರುವ ತಮ್ಮ ಶಿಷ್ಯಂದಿರ ಕಣ್ಣೀರು ಇನ್ನೂ ಬತ್ತಿಲ್ಲವೆಂದಾದರೆ.......ಅವರೆಡೆಯಲ್ಲಿ ತಾವು ಮೂಡಿಸಿದ ಛಾಪು ಅದೆಂತಹುದೋ..
ಉಸ್ತಾದ್ ನಿಮ್ಮಂತಹ ಮರಣ ನಮಗೂ ಬರಬಾರದೇ ಎಂದು ನನ್ನಂತೆಯೇ ಹಲವರು ಚಿಂತಿಸುತ್ತಿದ್ದಾರೆ.ಹಾಗೆ ಭಾವಿಸುವುದರಲ್ಲೇನಾದರೂ ತಪ್ಪಿದೆಯೇ?ನಿಮಗೂ ತಿಳಿದಿದೆಯಲ್ಲವೇ........ಸ್ವಹಾಬಿಯೊಬ್ಬರು ಮರಣಹೊಂದಿದರು..ತನ್ನ ಶಿಷ್ಯನ ಅಂತಿಮ ಯಾತ್ರೆಯಲ್ಲಿ ಪ್ರವಾದಿವರ್ಯರ ಪ್ರಾರ್ಥನೆಯನ್ನು ಕಂಡ ಸ್ವಹಾಬಿಯೊಬ್ಬರು ಉದ್ಘರಿಸಿದ ಮಾತು...."ಆ ಮಯ್ಯಿತ್ ನಾನಾಗಿದ್ದರೇ"....
ನಾಳೆ ಪರಲೋಕದಲ್ಲಿ ಅಲ್ಲಾಹನು ನಮ್ಮನ್ನು ಒಂದುಗೂಡಿಸಲಿ ಆಮೀನ್

Wednesday, 11 October 2017

ದಕ್ಶಿಣ ಕನ್ನಡ ದಲ್ಲಿ ಹುಟ್ಟುವ ಮಕ್ಕಳು ಭಾಗ್ಯಶಾಲಿಗಳು

ದಕ್ಶಿಣ ಕನ್ನಡ ದಲ್ಲಿ ಹುಟ್ಟುವ ಮಕ್ಕಳು ಭಾಗ್ಯಶಾಲಿಗಳು ಕಾರಣ ಇಲ್ಲಿ ಹುಟ್ಟುವ ಮಕ್ಕಳು ನಾಲ್ಕು ವಿವಿಧ ಭಾಷೆಗಳನ್ನು ಕಲಿತು ಬೆಳೆಯುತ್ತಾರೆ ಕನ್ನಡ ತುಳು ಬ್ಯಾರಿ ಮತ್ತು ಮಲಯಳಮ್..  ಬ್ಯಾರಿ ಅಂದರೆ ಬಹ್ರೀ ಎಂದಾಗಿದೆ ಅದರ ಅರ್ಥ.. ಬಹ್ರ್ ಅಂದರೆ ಅರಬಿ ಭಾಷೆಯಲ್ಲಿ ಕಡಲು ಎಂದರ್ಥ.. ನಾವೆಲ್ಲ ಕರಾವಳಿ ಪ್ರದೇಶದ ಮುಸ್ಲಿಮರದ್ದರಿಂದ ಅರಬಿಗಳು ನಮ್ಮನ್ನು ಬಹ್ರ್ ಪ್ರದೇಶದವರು ಎಂಬ ಅರ್ಥದಲ್ಲಿ ಬಹ್ರೀ ಎಂದು ಕರೆದರು.. ನಂತರ ಬಹ್ರೀ ಬ್ಯಾರಿ ಆಯ್ತು..

ನೂಹ್ ನಬಿ (ಅ)  ರವರ ಹಡಗು ಜೂದಿಯ್ಯ್ ಎಂಬ ಪರ್ವತದ ತುದಿಯಲ್ಲಿ ಬಂದು ನಿಂತಿತ್ತು.. ಎಂದು ಖುರಾನ್ ಹೇಳುತ್ತದೆ ಈ ಜೂದಿಯ್ಯ್ ಎಂಬುವುದು ಅರಬಿ ಭಾಷೆ ಅದನ್ನು ಭಾರತೀಯ ಭಾಷೆಯಲ್ಲಿ ಅಜೂದಿ.. ಅಜೋದ್ಯ..  ಕೊನೆಗೆ ಅದು ಅಯೋದ್ಯವಾಗಿದೆ.. ಅಂದರೆ ಆ ಹಡಗು ಭಾರತದ ಅಯೋದ್ಯಯಲ್ಲಿ ಬಂದು ನಿಂತಿತು ಎಂದು ಕೆಲವು ಇಮಾಮ್ ಗಳು ಅಬಿಪ್ರಾಯ ಪಟ್ಟಿದ್ದಾರೆ..  ಅಂದರೆ ಬಲು ಪುರಾತನ ಕಾಲದಿಂದಲೂ ಭಾರತದಲ್ಲಿ ಇಸ್ಲಾಮ್ ಇತ್ತು  ಎಂಬುವುದಕ್ಕೆ ಸೂಚನೆಯಾಗಿದೆ ಇದೆಲ್ಲ..

ಎಂದು : ಹಕೀಮ್ ಅಝ್ಹರೀ
( ಏ. ಪಿ ಉಸ್ತಾದರ ಸುಪುತ್ರ)
ಉಪ್ಪಿನಂಗಡಿ ಉಲಾಮ ಕಾಂಫ್ರೆನ್ಸ್ ನಲ್ಲಿ  SmilGadiyara💚💚💚💚💚💚

ಕನ್ನಡ ಮಣ್ಣಿನಲ್ಲಿ ಹೊಸ ಅದ್ಯಾಯಕ್ಕೆನಾಂದಿ

ಸುಮಾರು 25 ವರ್ಷಗಳ ಹಿಂದೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ವಿಷಯವಾಗಿತ್ತು  ಕರ್ನಾಟಕದ ಮಣ್ಣಿನಲ್ಲಿ ಇಂತಹ ಅತ್ಯಂತ ಶಿಸ್ತುಬಧ್ದವಾದ ಒಂದು ಉಲಮಾ ಸಮಾವೇಶ.


ಸುಮಾರು 25 ವರ್ಷಗಳ ಹಿಂದೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ವಿಷಯವಾಗಿತ್ತು  ಕರ್ನಾಟಕದ ಮಣ್ಣಿನಲ್ಲಿ ಇಂತಹ ಅತ್ಯಂತ ಶಿಸ್ತುಬಧ್ದವಾದ ಒಂದು ಉಲಮಾ ಸಮಾವೇಶ.
         ಆದರೆ ಕನ್ನಡಿಗ ವಿಧ್ವಾಂಸರು ಈ ಚರಿತ್ರೆಯನ್ನು ಬದಲಿಸಿ ಉಪ್ಪಿನಂಗಡಿಯ ಹೃದಯಭಾಗದಲ್ಲಿ ಹೊಸದೊಂದು ಅಧ್ಯಾಯವನ್ನು ಬರೆದಿದ್ದಾರೆ.ಬಿಳಿವಸ್ತ್ರಧಾರಿ ವಿಧ್ವಾಂಸರಿಂದ ಬಿಳಿ ವರ್ಣಮಯಗೊಂಡಿದ್ದ ಉಪ್ಪಿನಂಗಡಿ ನಗರವು ಇಸ್ಲಾಮಿನಿಂದ ಶಾಂತಿಯನ್ನಲ್ಲದೆ ಬಯಸಲು ಸಾಧ್ಯವಿಲ್ಲ ಎಂಬ ಉದಾತ್ತ ಸಂದೇಶವನ್ನು ಸಾರುತ್ತಿತ್ತು.
      ಮೂರು ದಿನಗಳಲ್ಲಿ ನಡೆದ ಸಮಾವೇಶವು ಅತ್ಯಂತ ಶಿಸ್ತು ಬಧ್ಧವೂ ಯಶಸ್ವಿಯೂ ಆಗಿತ್ತು.
      ಕನ್ನಡಿಗ ಉಲಮಾ ದಿಗ್ಗಜರಾದ ಬೇಕಲ್ ಉಸ್ತಾದ್,ಅಬ್ಬಾಸ್ ಉಸ್ತಾದ್,ಮಾಣಿ ಉಸ್ತಾದ್ ಮುಂತಾದವರ ನಾಯಕತ್ವದಲ್ಲಿ ವಿಧ್ವಾಂಸರ ಒಂದು ಬಳಗದ ಅವಿಶ್ರಾಂತ ಕಾರ್ಯಾಚರಣೆಯ  ಫಲವಾಗಿತ್ತು ಈ ಯಶಸ್ಸು.
 ವಳವೂರು ಮುಹಮ್ಮದ್ ಸಅದಿ ಉಸ್ತಾದ್,ಯೂಸುಫ್ ಸಅದಿ ಉಸ್ತಾದ್,ಮುಹಮ್ಮದ್ ಅಲಿ ಫೈಝಿ ಉಸ್ತಾದ್,ತೋಕೆ ಉಸ್ತಾದ್,ಜಿ.ಎಮ್.ಉಸ್ತಾದ್,ಝೈನಿ ಉಸ್ತಾದ್,ಮೂಡಡ್ಕ ಸಖಾಫಿ,ಕೆಕೆಎಮ್ ಕಾಮಿಲ್ ಸಖಾಫಿ ಅಶ್ರಫ್ ಸಖಾಫಿ ಕಿನ್ಯ ಮುಂತಾದ ಅನೇಕರು ಈ ಬಳಗದಲ್ಲಿದ್ದರು. ಅಲ್ಲಾಹು ಅವರ ಶ್ರಮಗಳನ್ನು ಸ್ವೀಕರಿಸಲಿ ಆಮೀನ್.
🔹ಅವರ ಮ್ಯಾಜಿಕ್ ನಡೆದೇ ಬಿಟ್ಟಿತು🔹
             ಇಲ್ಲಿ ಒಬ್ಬರ ಮ್ಯಾಜಿಕ್ ಮೈಂಡ್ ತುಂಬಾ ಕೆಲಸ ಮಾಡಿದೆ. ತಿಂಗಳುಗಳ ಹಿಂದೆ ಮುಶಾವರದಲ್ಲಿ ಈ ಸಮಾವೇಶದ ಪ್ರಸ್ತಾಪ ಬಂದಾಗಲೇ ಅವರ ದೂರದೃಷ್ಠಿಯಿಂದ ಅವರು ವಿನೂತನ ವ್ಯವಸ್ತೆ ಬಗ್ಗೆ ಪ್ರಸ್ತಾಪಿಸಿದ್ದರು.ಆ ವ್ಯವಸ್ತೆಯನ್ನು ಜಾರಿಗೆ ತಂದಿರುವುದು ಈ ಸಮಾವೇಶದ ಯಶಸ್ವಿನಲ್ಲಿ ಮುಖ್ಯ ಪಾತ್ರ ವಹಿಸಿದೆ.ಅದ್ಯಾವುದೆಂದರೆ ಸುನ್ನೀ ರೇಂಜ್ ಮಟ್ಟದಲ್ಲಿ  ಝೋನಲ್ ಸಮಿತಿಗಳ ರಚನೆಯಾಗಿತ್ತು.ಇದು ಅತ್ಯಂತ ಯಶಸ್ಸೀ ಪ್ಲಾನ್ ಆಗಿತ್ತು.
        ಅವರ ಪ್ಲಾನ್ ಗಳೆಲ್ಲವೂ ಹೀಗೇ.ಯಶಸ್ಸಲ್ಲದೆ ಪರಾಭವಗೊಂಡದ್ದೇ ಇಲ್ಲ.
  ಎರಡು ವರ್ಷಗಳ ಹಿಂದೆ ನಡೆದ ಸುಲ್ತಾನುಲ್ ಉಲಮಾರ ಕರ್ನಾಟಕ ಯಾತ್ರೆಯಾಗಿರಬಹುದು.ಅದರ ಯಶಸ್ಸಿನಲ್ಲಿಯೂ ಇವರದೇ ಮುಖ್ಯ ಪಾತ್ರ. ಕರ್ನಾಟಕದ ಸಂಘಟನಾ ಬೆಳವಣಿಗೆಯಲ್ಲೂ ಇವರದೇ ಮಾಸ್ಟರ್ ಪ್ಲಾನ್ ಕೆಲಸಮಾಡಿದ್ದು. SSF,SYS,SJM,SMA,KMJC ಮುಂತಾದ ಎಲ್ಲಾ ಸಂಘಟಣೆಗಳಲ್ಲಿ ಇವರ ಪಾತ್ರ ಇದ್ದೇ ಇದೆ.
            ಇವರು ಬೇರೆ ಯಾರೂ ಅಲ್ಲ. ಮರ್ಕಝ್ನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಶೈಖುನಾ ಸುಲ್ತಾನುಲ್ ಉಲಮಾದ ಪುಣ್ಯನಾಲಗೆಯಿಂದ “ಅಬೂಹಾಮಿದ್“ಎಂಬ ಬಿರುದನ್ನು ಪಡೆದಿದ್ದ ಬಹು SP. ಹಂಝ ಸಖಾಫಿ ಬಂಟ್ವಾಳ ರವರಾಗಿರುತ್ತಾರೆ.ಅಲ್ಲಾಹು ದೀರ್ಘಾಯುಸ್ಸು ಆಫಿಯತನ್ನು ಕರುಣಿಸಲಿ ಆಮೀನ್.
ಇವರು ಶ್ರಮಜೀವಿ.ನಿಷ್ಕಳಂಕ,ನಿಸ್ವಾರ್ಥ,ನಿಷ್ಪಕ್ಷ ಹೃದಯದ ವಕ್ತಾರ. 1991-92 ರಅವಧಿಯಲ್ಲಿ ಮರ್ಕಝ್ ನಲ್ಲಿ ಮುತವ್ವಲ್ ವಿಧ್ಯಾರ್ಥಿ ಸಹಪಾಠಿಗಳಾಗಿದ್ದೆವು.ಆ ಸಮಯದಲ್ಲೇ ಕನ್ನಡಮಣ್ಣಿನಲ್ಲಿ ಸುನ್ನೀ ಸಂಘಟನೆ ಬಗ್ಗೆ ಅನೇಕ ಕನಸುಗಳನ್ನು ಕಾಣುತ್ತಿದ್ದರು.ಇಲ್ಲಿನ ಶೋಚನೀಯ ಅವಸ್ಥೆಗಳ ಬಗ್ಗೆ ಅರ್ಧ ರಾತ್ರಿಗಳ ತನಕ ನಿದ್ರಿಸದೆ ಮರ್ಕಝ್ ಶರೀಅತ್ ಕಾಲೇಜಿನ ವರಾಂಡಗಳಲ್ಲಿ ಕುಳಿತು ಚರ್ಚಿಸುತ್ತಿದ್ದುದುಂಟು.
      ಆ ಸಮಯದಲ್ಲೇ ಸಂಘಟಣಾ ರಂಗಕ್ಕೆ ದುಮುಕಿ ಕ್ರಾಂತಿಕಾರಿ ಚಟುವಟಿಕೆ ಗಳನ್ನು ಮಾಡುವ ಪ್ರಯತ್ನ ಮಾಡುತ್ತಿದ್ದರು. ಅಂದು ಅವರು ಕಾಣುತ್ತಿದ್ದ ಅನೇಕ ಕನಸುಗಳನ್ನು ನನಸು ಮಾಡುವುದರಲ್ಲಿ ಬಹುತೇಕ ಯಶಸ್ವಿಯಾಗಿರುತ್ತಾರೆಂಬುದರಲ್ಲಿ ಅನುಮಾನವೇ ಇಲ್ಲ.
     ಕರ್ನಾಟಕದ ಎಸ್ಸೆಸ್ಸಫ್ ನ ಪ್ರಾರಂಭ ಕಾಲದಲ್ಲಿ ಅಂದಿನ ಸಂಕೀರ್ಣ ಸಂಕಷ್ಟಮಯ ಸಮಯಗಳಲ್ಲಿಯೂ ನಿಸ್ವಾರ್ಥವಾಗಿ ದುಡಿದವರೂ ನಾಯಕತ್ವವನ್ನು ನೀಡಿದವರೂ ಆಗಿರುತ್ತಾರೆ.
        ವಿನೀತನಾದ ನಾನು ಎಸ್ಸೆಸ್ಸಫ್ ನ ರಾಜ್ಯಾಧ್ಯಕ್ಷ ನಾಗಿಯೂ GM ಉಸ್ತಾದರು ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಸಮಯ ಮಂಗಳೂರು ಬಂದರಿನಲ್ಲಿರುವ ಮಾಜಿ ಸಚಿವ ಸಿ.ಎಮ್ ಇಬ್ರಾಹೀಮ್ ರವರ ಕಾಂಪ್ಲೆಕ್ಸ್ ನಲ್ಲಿ ಕಚೇರಿಯನ್ನು ಪಡೆದಿದ್ದೆವು.
        ಕಾರ್ಯಕರ್ತರ ತೀವ್ರ ಅಭಾವವನ್ನು ಎದುರಿಸುತ್ತಿದ್ದ   ಅಂದು ಅನೇಕ ಕಡತಗಳನ್ನು ಬರೆದು ಮುಗಿಸಬೇಕಾಗಿತ್ತು.
ನಾನು ಕನ್ನಂಗಾರಿನಲ್ಲಿ ಮುದರ್ರಿಸ್ GM ಉಸ್ತಾದರು ಸೂರಿಂಜೆಯಲ್ಲಿ ಮುದರ್ರಿಸರಾದ್ದರಿಂದ ಆಫೀಸಿನಲ್ಲಿ ಕುಳಿತು ಕೆಲಸಮಾಡಲು ಆಸಾಧ್ಯವಾಗಿತ್ತು.
 ಅಂದು ಯಾವುದೇ ಉದ್ಯೋಗದಲ್ಲಿರದ SP ಉಸ್ತಾದರನ್ನು ಆಫೀಸಿನಲ್ಲಿ ಕುಳಿತು ಕೆಲಸಮಾಡಲು ಕೇಳಿಕೊಂಡಿದ್ದೆವು. ಅದನ್ನು ಒಪ್ಪಿಕೊಂಡು ಕಚೇರಿಯಲ್ಲಿಯೇ ಕುಳಿತು ರಾತ್ರಿ ಅಲ್ಲಿಯೇ ತಂಗಿ ಕೆಳಸಗಳನ್ನು ಮಾಡುತ್ತಿದ್ದರು.
   ಒಂದು ದಿನ ನಾನು ಮತ್ತು Gm ಉಸ್ತಾದರು ಕಚೇರಿಗೆ ಹೋದೆವು. ಸಮಯ ಮದ್ಯಾಹ್ನವಾಗಿತ್ತು. SP ಉಸ್ತಾದರು ಕಡತಗಳನ್ನು ಬರೆಯುತ್ತಾ ಇದ್ದರು. ನಾಷ್ಟ ಮಾಡಿದ್ದೀರಾ ಎಂದು ಕೇಳುವಾಗ ಇಲ್ಲ ಎಂದರು.
ಪರಿಶೀಲಿಸಿದಾಗ ಹಣವಿಲ್ಲದ ಕಾರಣ ನಾಷ್ಟ ಮಾಡಿಲ್ಲ ಎಂದು ತಿಳಿಯಿತು. ಆಗ ಕಚೇರಿಯಲ್ಲಿ ಬಾತ್ರೂಮ್ ಇಲ್ಲ.ಫ್ಯಾನ್ ಇಲ್ಲ.ನಾಷ್ಟನೂ ಮಾಡದೆ ಮಧೃದ್ಯಾಹ್ನದ ವರೆಗೆ ಕೆಲಸವನ್ನು ಮಾಡುತ್ತಿದ್ದರು. 
        ಇದು ಒಂದು ಸಣ್ಣ ಉದಾಹರಣೆ ಮಾತ್ರ.ಇಂತಹ ಅನೇಕ ಉದಾಹರಣೆಗಳನ್ನು ಅವರ ಸಂಘಟನಾ ಜೀವನದಲ್ಲಿ ಹಲವಾರು ಕಾಣಬಹುದು.
    ಆದುದರಿಂದ ಇವರು ನಮ್ಮ ಸುನ್ನೀ ಕರ್ನಾಟಕದ ಅಭಿಮಾನ.
ಅಲ್ಲಾಹುವೇ ಇವರಿಗೂ ನಮ್ಮ ಎಲ್ಲಾ ಉಲಮಾಗಳಿಗೂ ಇನ್ನಷ್ಟು ಹಿಮ್ಮತ್ತನ್ನು ನೀಡಿ ಅನುಗ್ರಹಿಸು.ಆಮೀನ್.
          ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ಣ

Monday, 18 September 2017

ಕರುನಾಡ ಮಣ್ಣಿನಲ್ಲಿ ಎಸ್ಸೆಸ್ಸಫ್ ಗಿಂದು ಇಪ್ಪತ್ತೊಂಭತ್ತರ ಜನುಮದಿನದ ಹರುಷ. ಕಳೆದು ಹೋಯಿತು ಸಾರ್ಥಕತೆಯ ಇಪ್ಪತ್ತೆಂಟು ವರುಷ..!!


ಅರ್ಥಶೂನ್ಯವಾದ ಜೀವನಕ್ಕೆ ಅರ್ಥವತ್ತಾದ ಮೌಲ್ಯಗಳನ್ನು ಕಲಿಸಿಕೊಟ್ಟು ಬೆಳೆಸಿದ ಸಂಘಟನೆ. ಅಧರ್ಮದ ಹಾದಿ ಹಿಡಿದ ಯೌವನಕ್ಕೆ, ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಮುನ್ನೇರುತಿರುವ ಸಂಘಟನೆ.ಅನ್ಯಾಯದ ಮಾರ್ಗದಲ್ಲಿ ಸಂಚರಿಸುವಾಗ, ನ್ಯಾಯಯುತವಾದ ಹಾದಿಯನ್ನು ತೋರಿಸಿಕೊಟ್ಟ ಸಂಘಟನೆ. ಕೆಡುಕುಗಳತ್ತ ಮನಸ್ಸಿನ ಚಿತ್ತ ಬೆಳೆಯುವಾಗ, ಒಳಿತಿನತ್ತ ಕೊಂಡೊಯ್ದ ಸಂಘಟನೆ, ತನ್ನ ಧರ್ಮವನ್ನು ಪ್ರೀತಿಸುತ್ತಿರುವಾಗ, ಅನ್ಯ ಧರ್ಮವನ್ನು ಗೌರವಿಸಲು ಎಚ್ಚರಿಸುತ್ತಾ ಬಂದ ಸಂಘಟನೆ ಅದುವೇ ಎಸ್ಸೆಸ್ಸಫ್..!!
ಧಾರ್ಮಿಕ ಪ್ರಜ್ಞೆ, ಸಾಮಾಜಿಕ ಸೇವೆ,ಶೈಕ್ಷಣಿಕ ಕ್ರಾಂತಿಯ ಮೂಲಕ ಕಳೆದ ನಾಲ್ಕು ದಶಕಗಳ ಹಿಂದೆ ಜನ್ಮ ತಾಳಿದ ಎಸ್ಸೆಸ್ಸಫ್, ಕರ್ನಾಟಕದ ಮಣ್ಣಿಗೆ ಕಾಲಿರಿಸಿ ಇಪ್ಪತ್ತೆಂಟು ಸಂವತ್ಸರಗಳು ಕಳೆದು ಹೋದವು.
ಆರೋಪ,ಅಪಪ್ರಚಾರ,ಅಪಹಾಸ್ಯಗಳನ್ನೆಲ್ಲಾ ನಗುಮೊಗದಿಂದಲೇ ಸ್ವೀಕರಿಸಿ ಮುನ್ನೇರಿದ ಸಂಘಟನೆ ಕನ್ನಡ ನಾಡಿನಲ್ಲಿ ಸೃಷ್ಟಿಸಿದ ಕ್ರಾಂತಿಗಳು ಮಾತ್ರ ಅತ್ಯಧ್ಭುತವಾದದ್ದು..!!
"ಕೆಡುಕುಗಳಿಂದ ಒಳಿತಿನೆಡೆಗೆ" ಅನ್ನುವ ಉದಾತ್ತವಾದ ಘೋಷವಾಕ್ಯಗಳೊಂದಿಗೆ ಮುನ್ನೇರುತ್ತಿರುವ ಎಸ್ಸೆಸ್ಸಫ್ ಯುವ ಸಮೂಹವು ಗಾಂಜಾ,ಮಾದಕ ವಸ್ತುಗಳ ದಾಸರಾಗುತ್ತಿರುವ ಸಂದರ್ಭಗಳೆಲ್ಲಾ ಅವರನ್ನು ಅದರಿಂದ ದೂರವಿರಿಸುವಂತೆ ಮಾಡಿ, ನಿರಂತರವಾಗಿ ಅದರ ಕುರಿತು ಜಾಗೃತಿ ಆಂದೋಲನ ಒಳಿತೆನೆಡಗೆ ಅವರನ್ನು ಕೊಂಡೊಯ್ಯವಲ್ಲಿ ಸಫಲವಾಗಿದೆ.
ಸಮಾಜದಲ್ಲಿ ತಾಂಡವಾಡುವ ವರದಕ್ಷಿಣೆಯ ವಿರುದ್ಧ ಪರಿಣಾಮಕಾರಿಯಾಗುವ ಆಂದೋಲನಕ್ಕೆ ಮುನ್ನುಡಿಯಿರಿಸಿ ಸಂಘಟನೆಯ ಇಪ್ಪತ್ತೈದನೇ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಇಪ್ಪತ್ತೈದು ಸಾವಿರ ಕಾರ್ಯಕರ್ತರಿಂದ ವರದಕ್ಷಿಣೆ ವಿರೋಧಿ ಪ್ರತಿಜ್ಞೆಯನ್ನು ಸ್ವೀಕರಿಸಿ ವರದಕ್ಷಿಣೆಯ ವಿರುದ್ಧ ರಣಕಹಳೆ ಮೊಳಗಿಸುವಂತಾಗಲು ಸಂಘಟನೆ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ಅದು ಸಮಾಜದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿಯಾಗಲಿ.
ಸಮುದಾಯದ ನಡುವಿನ ಪ್ರತಿಭೆಗಳು, ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರುವಂತಹ ಸಂದರ್ಭದಲ್ಲಿ ಪ್ರತಿಭೋತ್ಸವವನ್ನು ಸಂಘಟಿಸಿ ಅದೆಷ್ಟೋ ಯುವ ಪ್ರತಿಭೆಗಳ ಪ್ರತಿಭೆಯನ್ನು ಸಮಾಜಕ್ಕೆ ಅರ್ಪಿಸಲು ಸಾಧ್ಯವಾಗಿದೆ.
ಕಾಲೇಜ್ ಕ್ಯಾಂಪಸ್ ಗಳು ಅನೈತಿಕೆಯ ತಾಣಗಳಾಗುತ್ತಿರುವಂತಹ ಸಂದರ್ಭದಲ್ಲೂ, ಯತೀಂ ಮಕ್ಕಳ ಶೈಕ್ಷಣಿಕ ಶಿಕ್ಷಣಕ್ಕೆ ಅವರ ಬಡತನಗಳು ಕಾರಣಗಳಾಗುತ್ತಿರುವಾಗಲೂ ಶೈಕ್ಷಣಿಕ ಕ್ರಾಂತಿಯ ಮೂಲಕ ಅದೆಷ್ಟೋ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತು, ಸಮುದಾಯದ ನೊಂದ ಮನಸ್ಸುಗಳಿಗೆ ಆಸರೆಯಾದವು.
ಧಾರ್ಮಿಕ ಪ್ರಜ್ಞೆಯ ಅರಿವನ್ನು ಹೊಂದಿರದ ಉತ್ತರ ಕನ್ನಡದ ಹಲವು ಭಾಗಗಳಿಗೆ ಇಹ್ಸಾನ್ ತಂಡವನ್ನು ಕಳುಹಿಸಿ, ಅಲ್ಲಿಯ ಜನತೆಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ, ಹಿಂದುಳಿದ ಸಮುದಾಯದ ಜನರಿಗೆ ಶೈಕ್ಷಣಿಕ ಶಿಕ್ಷಣವನ್ನು ಕೊಡಿಸುವಂತಹ ವ್ಯವಸ್ಥೆಯನ್ನು ಮಾಡಿ ಕೊಡುವಲ್ಲಿ ಸಂಘಟನೆ ಯಶಸ್ವಿಯಾಗಿದೆ.
ಸಮುದಾಯದ ಸಹೋದರಿಯರು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುತ್ತಿರುವಂತಹ ಸಂದರ್ಭದಲ್ಲೇ ಕಾಲೇಜ್ ಕ್ಯಾಂಪಸ್ ಗಳಲ್ಲಿ ಅನಗತ್ಯ ವಿವಾದಗಳು ತಲೆದೋರುವಾಗ, ಸಮುದಾಯದ ಸಹೋದರಿಯರ ಮುಂದಿನ ಶೈಕ್ಷಣಿಕ ಹಾದಿಗೆ ತೊಡಕಾಗಬಾರದು ಅನ್ನುವ ದೂರದೃಷ್ಟಿಯಿಂದ ಮಹಿಳಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮುದಾಯದ ಸಹೋದರಿಯರ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದವು.
ಕಳೆದ ಇಪ್ಪತ್ತೆಂಟು ವರ್ಷಗಳಿಂದ ಕನ್ನಡ ನಾಡಿನಲ್ಲಿ ಸಾರ್ಥಕತೆಯ ಹಾದಿಯನ್ನು ಮುನ್ನಡೆಸುತ್ತಾ ಬಂದ ಎಸ್ಸೆಸ್ಸಫ್ ಗಿಂದ ಜನುಮದಿನದ ಹರುಷ. ಸಂಘಟನೆಯ ಯಶಸ್ಸಿಗಾಗಿ ಹಲವಾರು ನಾಯಕರು ಹಲವು ತ್ಯಾಗ, ಕಷ್ಟಗಳನ್ನು ಸಹಿಸಿಕೊಂಡು ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ. ಹಲವು ಆರೋಪ,ಅಪಪ್ರಚಾರ, ಅಪಹಾಸ್ಯಗಳನ್ನು ಸಹಿಸಬೇಕಾಗಿ ಬಂದಾಗಲೂ ಧೃತಿಗೆಡದೆ ಮುನ್ನೇರಿದ್ದಾರೆ. ಇಪ್ಪತ್ತೆಂಟು ಸಂವತ್ಸರಗಳನ್ನು ಪೂರೈಸಿಕೊಂಡು ಇಪ್ಪತ್ತೊಂಭತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಎಸ್ಸೆಸ್ಸಫ್ ನ *ಧ್ವಜ ದಿನದ* ಶುಭಾಶಯಗಳನ್ನು ಸಲ್ಲಿಸುತ್ತಾ,
ಮುಂದಿನ ದಿನಗಳಲ್ಲೂ ಸಮಾಜ, ಸಮುದಾಯದ ನಡುವೆ ಸಂಘಟನೆಯು ಯಶಸ್ವಿಯಾಗಿ ಮುನ್ನೇರಲಿ ಎಂದು ಹಾರೈಸುತ್ತಿದ್ದೇನೆ.
ಸ್ನೇಹಜೀವಿ ಅಡ್ಕ

Wednesday, 30 August 2017

*ಅರಫಾದಿನ ಹಾಗೂ ಪೆರ್ನಾಳ್ ದಿನದಂದು ಅತ್ಯಂತ ಫ್ರತಿಫಲದಾಯಕ ಝಿಕ್ರ್.......*



*سُبْحَانَ اللّهِ ، والْحَمْدُللّهِ ، وَ لا اِلهَ اِلَّا اللّهُ ، وَ اللّهُ اَكْبَرُ ، وَ لا حَوْلَ وَ لا قُوَّةَ اِلَّا بِاللّهِ – 100*

           🕌🕌🕌🕌🕌🕌
*يَا حَيُّ يَا قَيُّوْمُ بِرَحْمَتِكَ أَسْتَغِيْث  100*
            🕌🕌🕌🕌🕌🕌
*لا إلهَ إلا أنتَ سُبْحَانَكَ إِنِّي كُنْتُ مِنَالظّالِمِيْنَ...100* 
            🕌🕌🕌🕌🕌🕌

*حَسْبُنَا اللَّهُ وَنِعْمَ الْوَكِيلُ.    :    450*
            🕌🕌🕌🕌🕌🕌

*أَسْتَغْفِرُ اللَّهَ الْعَظِيمَ الَّذِي لاَ إِلَهَ إِلاَّ هُوَ الْحَيُّ الْْقَيُّومُ وَ أَتُوبُ إِلَيْهِ :100* 
           🕌🕌🕌🕌🕌🕌
*اللَّهُمَّ صَلِّ عَلَى سَيِّدِنَا مُحَمَّدٍ*
*وَعَلَى آلِ سَيِّدِنَا مُحَمَّدٍ*
 :100

ಸರ್ವರಿಗೂ ಬಲಿಪೆರ್ನಾಳ್ ಹಬ್ಬದ ಶುಭಾಶಯಗಳು.....
*(in advance.......)*

💢ಎಂ.ಕೆ.ಸಿ.ಅಜಿಲಮೊಗರು💢

ರೊಹಿಂಗ್ಯಾ ಮುಸ್ಲಿಮರ ಅಸಹಾಯಕತೆಯ ಕೂಗಿಗೆ ಮೌನವಾಯಿತೇ ಜಗತ್ತು..?!





ಜಗತ್ತಿನಲ್ಲಿ ಅತೀ ಹೆಚ್ಚು ದೌರ್ಜನ್ಯಕ್ಕೊಳಗಾಗುತ್ತಲೇ ಇರುವಂತಹ ಅಲ್ಪಸಂಖ್ಯಾತ ಸಮುದಾಯವಾಗಿದೆ ರೊಹಿಂಗ್ಯಾ ಮುಸ್ಲಿಮರು. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಮುಸ್ಲಿಂ ಸಮುದಾಯವು ನಾನಾ ರೀತಿಯ ಹಿಂಸೆಗಳನ್ನು ಅನುಭವಿಸುತ್ತಾ ಬರುತ್ತಿದ್ದರೂ  ಇದರ ವಿರುದ್ಧ ಶಬ್ದವೆತ್ತಬೇಕಾದ ವಿಶ್ವಸಂಸ್ಥೆ ಸಹಿತ ಪ್ರಬಲ ರಾಷ್ಟ್ರಗಳು ಇಂದು ಮೌನ ತಾಳಿರುವುದು ವಿಪರ್ಯಾಸ..!!
ಶಾಂತಿಯ ಪ್ರತಿಪಾದಕರು ಅಂತ ಬಿಂಬಿಸುವಂತಹ ಬೌದ್ಧ ಧರ್ಮದ ಅನುಯಾಯಿಗಳಿಂದಲೇ ಅಮಾನುಷವಾಗಿ ದೌರ್ಜನ್ಯಕ್ಕೀಡಾಗಿ ಸಾವು -ಬದುಕಿನ ನಡುವೆ ಹೋರಾಡುವ ರೊಹಿಂಗ್ಯಾ ಮುಸ್ಲಿಮರ ಅಸಹಾಯಕತೆಯ ಕೂಗು ಇಂದು ಕ್ಷೀಣಿಸತೊಡಗಿದೆ.

ತನ್ನ ದೇಶದಲ್ಲಿ ಪೌರತ್ವವನ್ನು ಪಡೆಯಲಾಗದೆ ಚಡಪಡಿಸುತ್ತಿರುವ ಅಲ್ಲಿನ ಮುಸ್ಲಿಮರನ್ನು ಕಳೆದ ಹಲವಾರು ವರ್ಷಗಳಿಂದ ಶೋಷನೆಗೊಳಪಡಿಸಿ ,ಅಮಾನುಷವಾಗಿ ದೌರ್ಜನ್ಯಕ್ಕೊಳಪಡಿಸುತ್ತಲೇ ಇದ್ದಾರೆ. ಸಮುದ್ರದ ನಡುವೆ ಹೊಟ್ಟೆಗೆ ಆಹಾರವಿಲ್ಲದೆ ವಿಲವಿಲನೆ ಒದ್ದಾಡುತ್ತಿರುವ ಆ ಮುದ್ದು ಕಂದಮ್ಮಗಳ ಮನಕಲಕುವ ದೃಶ್ಯಗಳು ಅದೆಂತಹ ಕಲ್ಲು ಹೃದಯಗಳನ್ನೂ ಕರಗಿಸಬಹುದಾದರೂ , ಜಗತ್ತಿನ ಬಹುತೇಕ ರಾಷ್ಟ್ರಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ.

ಸಿನಿಮಾ ತಾರೆಯರ ಮಡದಿಯರು ಗರ್ಭಿಣಿಯಾದರೂ ಅದನ್ನು ದಿನಗಟ್ಟಲೆ ವರ್ಣರಂಜಿತವಾಗಿ ಪ್ರಸಾರ ಮಾಡುವ ಮಾಧ್ಯಮಗಳು, ಗರ್ಭಿಣಿ ಮಹಿಳೆಯರು ಬೌದ್ಧ ಧರ್ಮದ ತೀವ್ರಗಾಮಿಗಳ ಅಮಾನುಷವಾದ ವರ್ತನೆಗೆ ಅನ್ಯಾಯವಾಗಿ ಈ ಲೋಕಕ್ಕೆ ವಿದಾಯ ಹೇಳುವಾಗ ಕಾಣದಂತೆ ನಟಿಸುತ್ತಿರುವುದು ದುರಂತ.
ಒಂದು ದೇಶದ ಅಲ್ಪಸಂಖ್ಯಾತ ಸಮುದಾಯವೊಂದು ಅನ್ಯಾಯವಾಗಿ ದೌರ್ಜನ್ಯಕ್ಕೊಳಗಾಗುತ್ತಿರುವಾಗ ಮಾನವೀಯತೆಯ ಹಸ್ತವನ್ನು ಚಾಚಬೇಕಾದ ವಿಶ್ವಸಂಸ್ಥೆಯ ಜಾಣ ಕುರುಡುತನ ಮಾನವೀಯತೆಯ ಸಾರವನ್ನು ಅಣಕಿಸುವಂತಿದೆ.
ನಿರಂತರವಾಗಿ ದೌರ್ಜನ್ಯಕ್ಕೊಳಗಾಗುತ್ತಾ ಅಭದ್ರತೆಯಿಂದ ಜೀವನ ಸಾಗಿಸಿ, ಸಾವು -ಬದುಕಿನ ಮಧ್ಯೆ ಹೋರಾಡುತ್ತಿರುವ ರೊಹಿಂಗ್ಯಾದ ಮುಸ್ಲಿಮರಿಗೆ ಸರ್ವಶಕ್ತನು ರಕ್ಷೆಯನ್ನು ನೀಡಲಿ.ಎಲ್ಲಾ ತರದ ಷಡ್ಯಂತ್ರಗಳಿಂದ ಜಾಗತಿಕ ಮುಸ್ಲಿಮರಿಗೆ ವಿಜಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.

📝ಸ್ನೇಹಜೀವಿ ಅಡ್ಕ

Popular Posts

Popular Posts

Blog Archive