Saturday, 17 March 2018

ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ CONTRIVE CAMP



ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಬಂಟ್ವಾಳ ಸೆಕ್ಟರ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "CONTRIVE CAMP" ಇತ್ತೀಚೆಗೆ ಮಾವಿನಕಟ್ಟೆಯಲ್ಲಿ ನಡೆಯಿತು. ಸೆಕ್ಟರ್ ಅಧ್ಯಕ್ಷರಾದ ಯೂನುಸ್ ಅಗ್ರಹಾರ  ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾವಿನಕಟ್ಟೆ ಜಮಾಅತ್ ಖತೀಬರಾದ ಜಬ್ಬಾರ್ ಸಅದಿ ಉಸ್ತಾದರು ದುವಾಗೈದು ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಹಬೀಬ್ ಪೆರಾಳ ಸ್ವಾಗತಿಸಿದರು. ಡಿವಿಷನ್ ಉಪಾಧ್ಯಕ್ಷರಾದ ಸಿದ್ದೀಕ್ ಸಅದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ತರಗತಿ ನಡೆಸಿದರು.


ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ರಶೀದ್ ವಗ್ಗ ಇವರು ಸಂಘಟನೆಯ ಮಹತ್ವ ತಿಳಿಸಿ ಚರ್ಚೆಯ ನೇತೃತ್ವ ವಹಿಸಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಸೆಕ್ಟರ್ ಉಸ್ತುವಾರಿ ಮನ್ಸೂರ್ ವಗ್ಗ, ಡಿವಿಷನ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ, ಮಾಜಿ ಸೆಕ್ಟರ್ ಅಧ್ಯಕ್ಷರಾದ ಜಬ್ಬಾರ್ ಸಅದಿ,ಇಸ್ಮಾಯಿಲ್ ಸಖಾಫಿ,ಅಶ್ರಫ್ ಸಖಾಫಿ ಉಪಸ್ಥಿತರಿದ್ದರು.

✍🏻ಹಾರಿಸ್ ಪೆರಿಯಪಾದೆ

Tuesday, 13 February 2018

ಶೈಖ್ ಜೀಲಾನಿ ರವರ ಅದ್ಭುತ ಜೀವನ ಮತ್ತು ಅತ್ಯದ್ಭುತ ಕರಾಮತ್'ಗಳು ಕೃತಿ

ಮರ್ಕಝ್ ಸ'ಆದಃ ಹೊರತರುತ್ತಿರುವ 
ಶೈಖ್ ಜೀಲಾನಿ ರಲಿಯಲ್ಲಾಹು ಅನ್'ಹು
ರವರ ಅದ್ಭುತ ಜೀವನ ಮತ್ತು ಅತ್ಯದ್ಭುತ ಕರಾಮತ್'ಗಳು ಕೃತಿಯ ಮುಂಗಡ ಬುಕ್ಕಿಂಗ್ ಅಭಿಯಾನದ ಫೋಷ್ಟರ್ ಬಿಡುಗಡೆ ಮಾಡಲಾಯಿತು

ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ನೂತನ ಪದಾಧಿಕಾರಿಗಳು




🌹 ಅದ್ಯಕ್ಷರು :-
ಯೂನುಸ್ ಅಗ್ರಹಾರ

🌹 ಪ್ರಧಾನ ಕಾರ್ಯದರ್ಶಿ :- 
ಹಬೀಬ್ ಪೆರಾಳ

🌹  ಕೋಶಾಧಿಕಾರಿ :- 
ಸಂಶುದ್ದೀನ್ ಪೆರಿಯಪಾದೆ

🌹ಕ್ಯಾಂಪಸ್ ಕಾರ್ಯದರ್ಶಿ
ಆಶಿಕ್ ಪೆರಾಳ

🌹 ಉಪಾದ್ಯಕ್ಷರು :- 
1ಅನ್ಸಾರ್ ಮಾವಿನಕಟ್ಟೆ
2ಜುನೈದ್ ಅರಬಿಗುಡ್ಡೆ

🌹 ಜೊತೆ ಕಾರ್ಯದರ್ಶಿ
1 ತ್ವಾಹ ಅಗ್ರಹಾರ
2




🌹 Executive Members 

1) ರಶೀದ್ ವಗ್ಗ
2)ಮನ್ಸೂರ್ ವಗ್ಗ
3)ಹಾರಿಸ್ ಪೆರಿಯಪಾದೆ
4)ಇರ್ಶಾದ್ ಪೆರಾಳ
5)ಸಂಶುದ್ದೀನ್ ಪೆರಾಳ
6)ರಿಯಾಝ್ ಪೆರಾಳ
7)ಅನ್ಸಾರ್ ಮಾವಿನಕಟ್ಟೆ
8)ಅಸ್ರಾರುದ್ದೀನ್ ಮಾವಿನಕಟ್ಟೆ
9)ಸುಹೇಲ್ ಕುಳಾಲು
10)ರಶೀದ್ ಕುಳಾಲು
11)ಜಾಬಿರ್ ಕುಳಾಲು
12)ಇಕ್ಬಾಲ್ ವಗ್ಗ
13)ಇಕ್ಬಾಲ್ ರೋಯಲ್ ವಗ್ಗ
14)ಹನೀಫ್ ಪಲ್ಲಮಜಲು
15)ಸಿನಾನ್ ಅಗ್ರಹಾರ

ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು💐💐💐 

ತಮಗೆ ನೀಡಿದ ಜವಾಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಅಲ್ಲಾಹು ತೌಫೀಖ್ ನೀಡಿ ಅನುಗ್ರಹಿಸಲಿ ಆಮೀನ್ 

ನಿಮಗೆ ಸದಾ ಸಹಕಾರ, ಪ್ರೊತ್ಸಾಹ, ಬೆಂಬಲವಿದೆ ಇನ್ಶಾ ಅಲ್ಲಾಹ್

✍🏻ಹಾರಿಸ್ ಪೆರಿಯಪಾದೆ

ಎಸ್ಎಸ್ಎಫ್ ಬಂಟ್ವಾಳ ಡಿವಿಜನ್ ವಾರ್ಷಿಕ ಕೌನ್ಸಿಲ್ ನೂತನ ಸಮಿತಿಯ ರಚನೆ

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಎಸ್ಎಫ್ ಬಂಟ್ವಾಳ ಡಿವಿಜನ್ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ಬಿ.ಸಿ ರೋಡಿನ ಎಸ್ಸೆಸ್ಸಫ್ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಹುಮಾನ್ಯರಾದ ಸಿದ್ದಿಕ್ ಸಅದಿ ಉಸ್ತಾದರು ದುವಾಗೈದು,  ಡಿವಿಷನ್ ಪ್ರಧಾನ ಕಾರ್ಯದರ್ಶಿ ಆಬಿದ್ ನಈಮಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ ನೆರವೇರಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಶೀದ್ ವಗ್ಗ, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ನಈಮಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮೌಸೂಫ್ ಅಬ್ದುಲ್ಲ, ಉಪಾಧ್ಯಕ್ಷರಾಗಿ ಅಕ್ಬರ್ ಅಲಿ ಮದನಿ ಹಾಗೂ ಸಿದ್ದೀಕ್ ಸಅದಿ, ಜತೆ ಕಾರ್ಯದರ್ಶಿಯಾಗಿ ಹಾರಿಸ್ ಪೆರಿಯಪಾದೆ ಹಾಗೂ ಇರ್ಶಾದ್ ಗೂಡಿಬಳಿ ಇವರನ್ನು ಪುನರಾಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ರಫೀಖ್ ಝುಹುರಿ ಮಂಚಿ ಆಯ್ಕೆಯಾದರು.
ವೀಕ್ಷಕರಾಗಿ ಜಿಲ್ಲಾ ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ ಆಗಮಿಸಿದರು. ಕೊನೆಯಲ್ಲಿ ದನ್ಯವಾದ ಸಮರ್ಪಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

✍🏻ಹಾರಿಸ್ ಪೆರಿಯಪಾದೆ

Sunday, 4 February 2018

ಎಸ್ ಎಸ್ ಎಫ್ ಪಾಣೆಮಂಗಳೂರು ಸೆಕ್ಟರ್🇸🇱 ನೂತನ ಪದಾಧಿಕಾರಿಗಳು

ಎಸ್ ಎಸ್ ಎಫ್ ಪಾಣೆಮಂಗಳೂರು ಸೆಕ್ಟರ್🇸🇱
  ನೂತನ ಪದಾಧಿಕಾರಿಗಳು

ಅಧ್ಯಕ್ಷರು -P.S ಯಹ್ಯಾ ಮದನಿ ಆಲಡ್ಕ

ಪ್ರ.ಕಾರ್ಯದರ್ಶಿ - ಅನ್ಸಾರ್ ಕಾರಾಜೆ

ಕೋಶಾಧಿಕಾರಿ- P.S ಇಬ್ರಾಹಿಮ್ ಆಲಡ್ಕ 

ಕ್ಯಾಂಪಸ್ ಕಾರ್ಯದರ್ಶಿ -ಅಹ್ಮದ್ ಶಮೀಮ್ ಆಲಡ್ಕ

ಉಪಾಧ್ಯಕ್ಷರು - ಉಸ್ಮಾನ್ ಸಖಾಫಿ ಸಜಿಪ
G.M ಶಫೀಖ್ ಸಖಾಫಿ ಆಲಡ್ಕ

ಕಾರ್ಯದರ್ಶಿ - ಹಾರಿಸ್ ಚಟ್ಟೆಕಲ್
ರಹ್ಮತುಲ್ಲಾ ಸಿದ್ದೀಖ್

ಎಲ್ಲಾ ನಾಯಕರುಗಳಿಗೆ ಅಭಿನಂದನೆಗಳು
💐💐💐💐💐💐💐💐
      ✍ರಹ್ಮತುಲ್ಲಾ ಸಿದ್ದೀಖ್
  ನೂತನ ಪದಾಧಿಕಾರಿಗಳು

ಅಧ್ಯಕ್ಷರು -P.S ಯಹ್ಯಾ ಮದನಿ ಆಲಡ್ಕ

ಪ್ರ.ಕಾರ್ಯದರ್ಶಿ - ಅನ್ಸಾರ್ ಕಾರಾಜೆ

ಕೋಶಾಧಿಕಾರಿ- P.S ಇಬ್ರಾಹಿಮ್ ಆಲಡ್ಕ 

ಕ್ಯಾಂಪಸ್ ಕಾರ್ಯದರ್ಶಿ -ಅಹ್ಮದ್ ಶಮೀಮ್ ಆಲಡ್ಕ

ಉಪಾಧ್ಯಕ್ಷರು - ಉಸ್ಮಾನ್ ಸಖಾಫಿ ಸಜಿಪ
G.M ಶಫೀಖ್ ಸಖಾಫಿ ಆಲಡ್ಕ

ಕಾರ್ಯದರ್ಶಿ - ಹಾರಿಸ್ ಚಟ್ಟೆಕಲ್
ರಹ್ಮತುಲ್ಲಾ ಸಿದ್ದೀಖ್

ಎಲ್ಲಾ ನಾಯಕರುಗಳಿಗೆ ಅಭಿನಂದನೆಗಳು
💐💐💐💐💐💐💐💐
      ✍ರಹ್ಮತುಲ್ಲಾ ಸಿದ್ದೀಖ್

ಎಸ್ಸೆಸ್ಸೆಫ್ ಬಿ.ಸಿ ರೋಡ್ ಸಿಟಿ ಶಾಖಾ ರಚನೆ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್

ಎಸ್ಸೆಸ್ಸೆಫ್ ಬಿ.ಸಿ ರೋಡ್ ಸಿಟಿ ಶಾಖಾ ರಚನೆ ಕಾರ್ಯಕ್ರಮ ಇತ್ತೀಚೆಗೆ ಬಿ.ಸಿ ರೋಡಿನ ಜಿಲ್ಲಾ ಕಛೇರಿಯಲ್ಲಿ ನಡೆಯಿತು. 




ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಆಬಿದ್ ಸಖಾಫಿ ಉಸ್ತಾದರು ದುವಾಗೈದು, ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ ಉಧ್ಘಾಟಿಸಿದರು. ಶಾಖೆಯ ಅಧ್ಯಕ್ಷರಾಗಿ ಆಬಿದ್ ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ಜುನೈದ್ ಉಸ್ತಾದ್, ಕೋಶಾಧಿಕಾರಿಯಾಗಿ ಹನೀಫ್ ಪಲ್ಲಮಜಲು, ಹಾಗೂ  ಕ್ಯಾಂಪಸ್ ಕಾರ್ಯದರ್ಶಿಯಾಗಿ ಹಾಫಿಝ್ ಅಹಮದ್ ಯಹ್ಯಾ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಜತೆ ಕಾರ್ಯದರ್ಶಿ ಸಲೀಂ ಬೈರಿಕಟ್ಟೆ ಸಂಘಟನೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
 ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಅಧಿಕಾರ ಹಸ್ತಾಂತರ ಮಾಡಿದರು. ನೂತನ ಶಾಖೆಯನ್ನು ಬಂಟ್ವಾಳ ಸೆಕ್ಟರಿಗೆ ಸೇರಿಸಲಾಯಿತು. 

✍🏻ಹಾರಿಸ್ ಪೆರಿಯಪಾದೆ

Friday, 2 February 2018

ಇಂದು ಮಧ್ಯಾಹ್ನ 2 ಗಂಟೆಗೆ, SSF ದ.ಕ ಜಿಲ್ಲಾ ಸಮಿತಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನನಗೆ ನೂರು ಶೇಕಡಾ ಭಾಗವಹಿಸಬೇಕು. ಯಾಕೆಂದರೆ ...!



SSF ಅಂದರೆ, ಅಹ್ಲುಸ್ಸುನ್ನತಿ ವಲ್ ಜಮಾಹತ್ ಎಂಬ ಇಸ್ಲಾಮಿನ ನೈಜ ಸಿದ್ಧಾಂತವನ್ನು ಸಂರಕ್ಷಿಸಲು ಪ್ರಗಲ್ಭರಾದ ಉಲಮಾಗಳು, ಸಯ್ಯಿದ್-ಸಾದಾತುಗಳು, ಅವುಲಿಯಾಗಳು ಕಟ್ಟಿ ಬೆಳೆಸಿದ ಸಂಘಟನೆಯಾಗಿದೆ.‌ ಅದರ ಪ್ರತಿಯೊಂದು ಕಾರ್ಯಕ್ರಮವೂ ಕೂಡಾ ಆರಾಧನೆ ಯಾಗಿದೆ. ಅದನ್ನು ಯಶಸ್ವಿಗೊಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡಾ.



ಸುನ್ನತ್ ಜಮಾಹತ್ ಇಲ್ಲಿ ಬಲಿಷ್ಠವಾಗಬೇಕಾದರೆ, ಅದಕ್ಕಾಗಿ ಕಾರ್ಯಾಚರಿಸುವ ಸಂಘಟನೆ ಕೂಡಾ ಬಲಿಷ್ಠವಾಗಬೇಕು. ಸಂಘಟನೆ ಬಲಿಷ್ಠವಾಗಬೇಕಾದರೆ, ಅದರ ಪ್ರತಿಯೊಂದು ಕಾರ್ಯಕ್ರಮವು ಕೂಡಾ ಯಶಸ್ವಿಯಾಗಬೇಕು. ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ, ನಮ್ಮಂತಹ ಕಾರ್ಯಕರ್ತರು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸುನ್ನತ್ ಜಮಾಹತ್ ಸಂರಕ್ಷಣೆಗಾಗಿ ಇದಕ್ಕಿಂತಲೂ ಉತ್ತಮ ಸೇವೆ ಮಾಡಲು ನಮ್ಮಂತವರಿಗೆ ಖಂಡಿತಾ ಸಾದ್ಯವಿಲ್ಲ. ಆದುದರಿಂದ, ನಮಗೆ ಸಿಕ್ಕಿದ ಈ ಒಂದು ಉತ್ತಮ ಅವಕಾಶವನ್ನು ನಾವು ಸದುಪಯೋಗ ಪಡಿಸಲೇಬೇಕು. ಇದು ನಾವು ಸುನ್ನತ್ ಜಮಾಹತ್ ಗೆ ಬೇಕಾಗಿ ಮಾಡುವ ಒಂದು ಅಳಿಲು ಸೇವೆ ಮಾತ್ರವಾಗಿದೆ. ಈ ಒಂದು ಅವಕಾಶವನ್ನು ಮಾಡಿಕೊಟ್ಟ ಅಲ್ಲಾಹನಿಗೆ ಸಾವಿರ ಸಾವಿರ ಸ್ತುತಿಗಳು. 

ನಾವು ಅಲ್ಲಾಹನಿಗಾಗಿ ಒಂದು ಹೆಜ್ಜೆ ಮುಂದಿಟ್ಟರೆ, ಅಲ್ಲಾಹು ನಮಗಾಗಿ ಹತ್ತಾರು ಹೆಜ್ಜೆ ಮುಂದಿಡುವನು. ಅಲ್ಲಾಹನ ಧರ್ಮ ಸಂರಕ್ಷಣೆಗಾಗಿ ಉಲಮಾಗಳು ರೂಪುಕೊಟ್ಟ ಸಂಘಟನೆಯ ಕಾರ್ಯಕ್ರಮವನ್ನು ನಾವು ಯಶಸ್ವಿ ಗೊಳಿಸಲು ಶ್ರಮಿಸಿದರೆ, ಖಂಡಿತಾ ನಮ್ಮ ಹತ್ತಾರು ಯೋಜನೆ-ಉದ್ದೇಶ ಗಳನ್ನು ಅಲ್ಲಾಹು ಯಶಸ್ವಿ ಗೊಳಿಸುತ್ತಾನೆ. ಅದರಲ್ಲಿ ಯಾವುದೇ ಸಂಶಯವಿಲ್ಲ. 

ಕೋಟಿ ರೂಪಾಯಿ ಸಹಾಯ ಮಾಡಿದವನಿಗೆ ಒಂದು ನೂರು ರೂಪಾಯಿ ತಿರುಗಿ ಸಹಾಯ ಮಾಡಲು ನಾವೇಗೆ ಹಿಂಜರಿಯುವುದಿಲ್ಲವೋ,  ಅದಕ್ಕಿಂತಲೂ ಮಿಗಿಲಾಗಿ, ಬೆಲೆ ಕಟ್ಟಲಾದ ಕಣ್ಣು, ಕಾಲು, ಕೈ, ಆರೋಗ್ಯ, ಸಂಪತ್ತು  ಅದೇರೀತಿ, ಎಲ್ಲದಕ್ಕಿಂತಲೂ ಮಿಗಿಲಾಗಿ ಹಿದಾಯತ್ ನ್ನು ಉಚಿತವಾಗಿ ಕರುಣಿಸಿದ, ವರ್ಷದಲ್ಲಿ ಮುನ್ನೂರೈವತ್ತು ದಿನ ಕೆಲಸ ಮಾಡಲು ಶಕ್ತಿ ಮತ್ತು ಆರೋಗ್ಯವನ್ನು ಕರುಣಿಸಿದ ಅಲ್ಲಾಹನಿಗಾಗಿ, ಅವನ ಧರ್ಮ ಸಂರಕ್ಷಣೆಗಾಗಿ ಕಾರ್ಯಾಚರಿಸುವ ಸಂಘಟನೆಗಾಗಿ ಒಂದರ್ಧ ದಿನ ರಜೆ ಮಾಡಲು ನಾವ್ಯಾಕೆ ಹಿಂಜರಿಯಬೇಕು?.
 ಇಲ್ಲ, ಖಂಡಿತಾ ನಾನು ಹಿಂಜರಿಯಲಾರೆ.

ಅಲ್ಲಾಹನಿಗಾಗಿ ಒಂದರ್ಧ ದಿನ ರಜೆ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ. ಅದು ನನ್ನ ಪಾಲಿಗೆ ಅಭಿಮಾನ. ಆ ಒಂದರ್ಧ ದಿನದ ಕಾರಣದಿಂದ, ನಮ್ಮ ಮರಣದ ವರೆಗೂ ಆರೋಗ್ಯವನ್ನು, ಸಂಪತ್ತನ್ನೂ ಅಲ್ಲಾಹು ವೃದ್ಧಿಸುವನು ಖಂಡಿತಾ, ಅಲ್ಲಾಹು ಕರುಣಿಸಲಿ, ಆಮೀನ್. 

in sha allah, ಶನಿವಾರ ಮಧ್ಯಾಹ್ನ 2 ಗಂಟೆಗೆ SSF ಜಿಲ್ಲಾ ಸಮಿತಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ನಾನು ತೀರ್ಮಾನಿಸಿದ್ದೇನೆ, ಮತ್ತು ನೀವು 👉🏽...... 

ಬರುವ  ನಂಬಿಕೆ ಇದೆ. ಇನ್ಶಾಅಲ್ಲಾಹ್

Popular Posts

Popular Posts

Blog Archive