Thursday, 29 March 2018

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ ಮತದಾನ ನಮ್ಮ ಹಕ್ಕು ಕಾರ್ಯಕ್ರಮ



ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಬಂಟ್ವಾಳ ಡಿವಿಷನ್  ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "ಮತದಾನ ನಮ್ಮ ಹಕ್ಕು  ಕಾರ್ಯಕ್ರಮ "  ಇತ್ತೀಚೆಗೆ ದಾರುಲ್ ಇಝ್ಝಾ ಕೌಡೇಲಿನಲ್ಲಿ ನಡೆಯಿತು. ಡಿವಿಷನ್  ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ  ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಪಾಧ್ಯಕ್ಷರಾದ ಇಬ್ರಾಹಿಮ್ ಸಖಾಫಿ ಉಸ್ತಾದರು ದುವಾಗೈದು ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಆಬಿದ್ ನಈಮಿ ಸ್ವಾಗತಿಸಿದರು. ಕೌಡೇಲ್ ಖತೀಬರಾದ ಮಜೀದ್ ಸಅದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ ಆಶಾಂಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಇಹ್ಸಾನ್ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ಶಾಫಿ ಸಅದಿ ಉಸ್ತಾದರು ಮತದಾನದ ಮಹತ್ವವನ್ನು ವಿವರಿಸಿದರು.



ಹದಿನೆಂಟು ವರುಷ ತುಂಬಿದ ಪ್ರತಿಯೊಬ್ಬರಿಗೂ ವಿವೇಚನಾ ಶಕ್ತಿ ಇದೆ. ತಮ್ಮ ರಾಜ್ಯದಲ್ಲಿ ಯಾರು ಆಡಳಿತ ನಡೆಸಬೇಕು, ಯಾವ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸಿ ಕೊಡಬೇಕೆಂಬ  ಜ್ಞಾನ ಪ್ರತಿಯೊಬ್ಬರಿಗೂ ಇದೆ. ಎಸ್ಸೆಸ್ಸೆಫ್ ಕಾರ್ಯಕರ್ತರು ಯಾವುದೇ ರಾಜಕೀಯ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸದೆ, ಪ್ರಜಾಪ್ರಭುತ್ವ ಭಾರತದ ಸಂವಿಧಾನವನ್ನು ಗೌರವಿಸಿ ನಾಡಿನ ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸುವ ಅಭ್ಯರ್ಥಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕಾಗಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ  ಡಿವಿಷನ್ ಪದಾಧಿಕಾರಿಗಳು ಹಾಗೂ ಕಾರ್ಯಾಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

✍🏻 ಹಾರಿಸ್ ಪೆರಿಯಪಾದೆ

Tuesday, 20 March 2018

ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ವತಿಯಿಂದ CONTRIVE CAMP




ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಪಾಣೆಮಂಗಳೂರು ಸೆಕ್ಟರ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "CONTRIVE CAMP" ಇತ್ತೀಚೆಗೆ ಗೋಳಿಪಡ್ಪು ಮದರಸ ಹಾಲ್ ನಲ್ಲಿ. ಸೆಕ್ಟರ್ ಅಧ್ಯಕ್ಷರಾದ PS ಯಹ್ಯಾ ಮದನಿ   ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಫೀಕ್ ಸಖಾಫಿ  ದುವಾದೊಂದಿಗೆ ಚಾಲನೆ ನೀಡಿದರು ಹಾಗೂ ಕ್ಯಾಂಪನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅನ್ಸಾರ್ ಕಾರಜೆ ಸ್ವಾಗತಿಸಿದರು. ಡಿವಿಷನ್ ನಾಯಕರಾದ ಮೆದು ಮದನಿ ಉಸ್ತಾದರು, ತರಗತಿ ನಡೆಸಿದರು.



ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಸೆಕ್ಟರ್ ಉಸ್ತುವಾರಿ ಹಾರೀಸ್ ಚಟ್ಟೆಕ್ಕಲ್,ಡಿವಿಶನ್ ನಾಯಕರಾದ ಅಲ್ತಾಫ್ ಕೊಳಕೆ,ಇರ್ಷಾದ್ ಗೂಡಿನಬಳಿ,ಮೌಸೂಫ್ ಮೆಲ್ಕಾರ್  ಸೆಕ್ಟರ್ ಮಾಜಿ ಅಧ್ಯಕ್ಷರಾದ ಮಜೀದ್ ಸಖಾಫಿ,ಉಸ್ಮಾನ್ ಸಖಾಫಿ ಹಾಗೂ ಸೆಕ್ಟರ್ ನಾಯಕರು  ಉಪಸ್ಥಿತರಿದ್ದರು.ಸೆಕ್ಟರ್ ಕಾರ್ಯದರ್ಶಿ ರಹ್ಮತುಲ್ಲಾ ಸಿದ್ದೀಖ್ ವಂದಿಸಿದರು.

Saturday, 17 March 2018

ರಾಜ್ಯ ಸುತ್ತೊಲೆಯ ಪ್ರಕಾರ ಮಾರ್ಚ್, ಎಪ್ರಿಲ್‌ ತಿಂಗಳುಗಳಲ್ಲಿ ನಡೆಯಬೇಕಾದ ಶಿಬಿರಗಳು.



1⃣ Unit Syneriya Camp: ಮಾರ್ಚ್
2⃣ Sector Contrive Camp: ಮಾರ್ಚ್
3⃣ Sector Summerice  Camp: ಎಪ್ರಿಲ್
4⃣ Sector SBS Butterfly: ಎಪ್ರಿಲ್
5⃣ DIVISION Ranzi  Camp: ಮಾರ್ಚ್
6⃣ ಮತದಾನ ನಮ್ಮ ಹಕ್ಕು: ಮಾರ್ಚ್

ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ CONTRIVE CAMP



ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಬಂಟ್ವಾಳ ಸೆಕ್ಟರ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "CONTRIVE CAMP" ಇತ್ತೀಚೆಗೆ ಮಾವಿನಕಟ್ಟೆಯಲ್ಲಿ ನಡೆಯಿತು. ಸೆಕ್ಟರ್ ಅಧ್ಯಕ್ಷರಾದ ಯೂನುಸ್ ಅಗ್ರಹಾರ  ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾವಿನಕಟ್ಟೆ ಜಮಾಅತ್ ಖತೀಬರಾದ ಜಬ್ಬಾರ್ ಸಅದಿ ಉಸ್ತಾದರು ದುವಾಗೈದು ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಹಬೀಬ್ ಪೆರಾಳ ಸ್ವಾಗತಿಸಿದರು. ಡಿವಿಷನ್ ಉಪಾಧ್ಯಕ್ಷರಾದ ಸಿದ್ದೀಕ್ ಸಅದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ತರಗತಿ ನಡೆಸಿದರು.


ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ರಶೀದ್ ವಗ್ಗ ಇವರು ಸಂಘಟನೆಯ ಮಹತ್ವ ತಿಳಿಸಿ ಚರ್ಚೆಯ ನೇತೃತ್ವ ವಹಿಸಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಸೆಕ್ಟರ್ ಉಸ್ತುವಾರಿ ಮನ್ಸೂರ್ ವಗ್ಗ, ಡಿವಿಷನ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ, ಮಾಜಿ ಸೆಕ್ಟರ್ ಅಧ್ಯಕ್ಷರಾದ ಜಬ್ಬಾರ್ ಸಅದಿ,ಇಸ್ಮಾಯಿಲ್ ಸಖಾಫಿ,ಅಶ್ರಫ್ ಸಖಾಫಿ ಉಪಸ್ಥಿತರಿದ್ದರು.

✍🏻ಹಾರಿಸ್ ಪೆರಿಯಪಾದೆ

Tuesday, 13 February 2018

ಶೈಖ್ ಜೀಲಾನಿ ರವರ ಅದ್ಭುತ ಜೀವನ ಮತ್ತು ಅತ್ಯದ್ಭುತ ಕರಾಮತ್'ಗಳು ಕೃತಿ

ಮರ್ಕಝ್ ಸ'ಆದಃ ಹೊರತರುತ್ತಿರುವ 
ಶೈಖ್ ಜೀಲಾನಿ ರಲಿಯಲ್ಲಾಹು ಅನ್'ಹು
ರವರ ಅದ್ಭುತ ಜೀವನ ಮತ್ತು ಅತ್ಯದ್ಭುತ ಕರಾಮತ್'ಗಳು ಕೃತಿಯ ಮುಂಗಡ ಬುಕ್ಕಿಂಗ್ ಅಭಿಯಾನದ ಫೋಷ್ಟರ್ ಬಿಡುಗಡೆ ಮಾಡಲಾಯಿತು

ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ನೂತನ ಪದಾಧಿಕಾರಿಗಳು




🌹 ಅದ್ಯಕ್ಷರು :-
ಯೂನುಸ್ ಅಗ್ರಹಾರ

🌹 ಪ್ರಧಾನ ಕಾರ್ಯದರ್ಶಿ :- 
ಹಬೀಬ್ ಪೆರಾಳ

🌹  ಕೋಶಾಧಿಕಾರಿ :- 
ಸಂಶುದ್ದೀನ್ ಪೆರಿಯಪಾದೆ

🌹ಕ್ಯಾಂಪಸ್ ಕಾರ್ಯದರ್ಶಿ
ಆಶಿಕ್ ಪೆರಾಳ

🌹 ಉಪಾದ್ಯಕ್ಷರು :- 
1ಅನ್ಸಾರ್ ಮಾವಿನಕಟ್ಟೆ
2ಜುನೈದ್ ಅರಬಿಗುಡ್ಡೆ

🌹 ಜೊತೆ ಕಾರ್ಯದರ್ಶಿ
1 ತ್ವಾಹ ಅಗ್ರಹಾರ
2




🌹 Executive Members 

1) ರಶೀದ್ ವಗ್ಗ
2)ಮನ್ಸೂರ್ ವಗ್ಗ
3)ಹಾರಿಸ್ ಪೆರಿಯಪಾದೆ
4)ಇರ್ಶಾದ್ ಪೆರಾಳ
5)ಸಂಶುದ್ದೀನ್ ಪೆರಾಳ
6)ರಿಯಾಝ್ ಪೆರಾಳ
7)ಅನ್ಸಾರ್ ಮಾವಿನಕಟ್ಟೆ
8)ಅಸ್ರಾರುದ್ದೀನ್ ಮಾವಿನಕಟ್ಟೆ
9)ಸುಹೇಲ್ ಕುಳಾಲು
10)ರಶೀದ್ ಕುಳಾಲು
11)ಜಾಬಿರ್ ಕುಳಾಲು
12)ಇಕ್ಬಾಲ್ ವಗ್ಗ
13)ಇಕ್ಬಾಲ್ ರೋಯಲ್ ವಗ್ಗ
14)ಹನೀಫ್ ಪಲ್ಲಮಜಲು
15)ಸಿನಾನ್ ಅಗ್ರಹಾರ

ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು💐💐💐 

ತಮಗೆ ನೀಡಿದ ಜವಾಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಅಲ್ಲಾಹು ತೌಫೀಖ್ ನೀಡಿ ಅನುಗ್ರಹಿಸಲಿ ಆಮೀನ್ 

ನಿಮಗೆ ಸದಾ ಸಹಕಾರ, ಪ್ರೊತ್ಸಾಹ, ಬೆಂಬಲವಿದೆ ಇನ್ಶಾ ಅಲ್ಲಾಹ್

✍🏻ಹಾರಿಸ್ ಪೆರಿಯಪಾದೆ

ಎಸ್ಎಸ್ಎಫ್ ಬಂಟ್ವಾಳ ಡಿವಿಜನ್ ವಾರ್ಷಿಕ ಕೌನ್ಸಿಲ್ ನೂತನ ಸಮಿತಿಯ ರಚನೆ

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಎಸ್ಎಫ್ ಬಂಟ್ವಾಳ ಡಿವಿಜನ್ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ಬಿ.ಸಿ ರೋಡಿನ ಎಸ್ಸೆಸ್ಸಫ್ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಹುಮಾನ್ಯರಾದ ಸಿದ್ದಿಕ್ ಸಅದಿ ಉಸ್ತಾದರು ದುವಾಗೈದು,  ಡಿವಿಷನ್ ಪ್ರಧಾನ ಕಾರ್ಯದರ್ಶಿ ಆಬಿದ್ ನಈಮಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ ನೆರವೇರಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಶೀದ್ ವಗ್ಗ, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ನಈಮಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮೌಸೂಫ್ ಅಬ್ದುಲ್ಲ, ಉಪಾಧ್ಯಕ್ಷರಾಗಿ ಅಕ್ಬರ್ ಅಲಿ ಮದನಿ ಹಾಗೂ ಸಿದ್ದೀಕ್ ಸಅದಿ, ಜತೆ ಕಾರ್ಯದರ್ಶಿಯಾಗಿ ಹಾರಿಸ್ ಪೆರಿಯಪಾದೆ ಹಾಗೂ ಇರ್ಶಾದ್ ಗೂಡಿಬಳಿ ಇವರನ್ನು ಪುನರಾಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ರಫೀಖ್ ಝುಹುರಿ ಮಂಚಿ ಆಯ್ಕೆಯಾದರು.
ವೀಕ್ಷಕರಾಗಿ ಜಿಲ್ಲಾ ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ ಆಗಮಿಸಿದರು. ಕೊನೆಯಲ್ಲಿ ದನ್ಯವಾದ ಸಮರ್ಪಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

✍🏻ಹಾರಿಸ್ ಪೆರಿಯಪಾದೆ

Popular Posts

Popular Posts

Blog Archive