Saturday, 26 August 2017

ಕೈಗಳು ನಡುಗುತ್ತಿದೆ.... ಇರ್ಷಾದ್ ಕರ್ನೂರ್ ನಮ್ಮಿಂದಗಳಿದ ವಾರ್ತೆ ಕೇಳಿ ಮನ ನೋಯುತ್ತಿದೆ....

ಸದಾ ಹಸನ್ಮುಖಿ.ಉತ್ತಮ ಗುಣ ನಡತೆಯ ಪ್ರತಿರೂಪ.ಪುತ್ತೂರಿನ ನೂರಾರು ವಿಧ್ಯಾರ್ಥಿಗಳಿಗೆ ಚಿರಪರಿಚಿತ ನಾಮ.ನನ್ನ ಸಹ ಕಾರ್ಯಕರ್ತ.ಕಳೆದ ವರ್ಷ ನಿರಂತರ ಎಸ್ ಎಸ್ ಎಫ್ ಕ್ಯಾಂಪಸ್ ಪುತ್ತೂರು ಕಾರ್ಯಕ್ರಮಗಳಲ್ಲಿ ಕಾಣುತ್ತಿದ್ದ ಮೇರು ವ್ಯಕ್ತಿತ್ವ ಇರ್ಷಾದ್ ಕರ್ನೂರ್...

     ಇದೀಗ ಅಪಘಾತದಲ್ಲಿ ನಿಧನ ವಾರ್ತೆ ಕೇಳಿ ನಂಬಳಾಗುತ್ತಿಲ್ಲ...
ನಮ್ಮಂತೆ ಆವೇಶ ಭರಿತವಾಗಿ ಎಲ್ಲರ ಜೊತೆಯೂ ಸಹಕಾರಿಯಾಗಿ ಭಾಗವಹಿಸುತ್ತಿದ್ದ ಮಿತ್ರ ಕಳೆದ ಬಾರಿ ಇಂಡಸ್ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತ ಸುನ್ನೀ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಸ್ ಎಸ್ ಎಫ್ ಕ್ಯಾಂಪಸ್ ಇಂಡಸ್ ಯುನಿಟ್ ರಚಿಸಿ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು....

     ಮಾತ್ರವಲ್ಲದೆ ಎಸ್ ಎಸ್ ಎಫ್ ಕ್ಯಾಂಪಸ್ ಪ್ರತಿಭೋತ್ಸವದಲ್ಲಿ ಪುತ್ತೂರು ಡಿವಿಷನ್ ಕ್ಯಾಂಪಸನ್ನು ಪ್ರತಿನಿಧಿಸಿ ಜಿಲ್ಲಾಮಟ್ಟದಲ್ಲಿ ಸ್ಫರ್ಧಾರ್ಥಿಯಾಗಿಯೂ ಭಾಗವಹಿಸಿದ್ದರು ಇರ್ಷಾದ್ ಕರ್ನೂರ್......

       ಈ ರೀತಿ ಎಸ್ ಎಸ್ ಎಫ್ ಕ್ಯಾಂಪಸ್ ಕಾರ್ಯಕರ್ತರಿಗೆ ನೂರು ಮಾತು ಹೇಳಲಿರುವ ಮಿತ್ರ ಮರ್ಹೂಂ ಇರ್ಷಾದ್ ಕರ್ನೂರ್ ರವರ ನಿಧನ ಸುನ್ನೀ ಸಮೂಹಕ್ಕೆ ದುಖವನ್ನು ತಂದಿದ್ದರೂ ಅಲ್ಲಾಹನ ವಿಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ...
ಆದರೆ ಇಂದು ಹಲವು ಯುವಕರ ನಡುವೆಯೂ ಭಾಗ್ಯವಂತರ  ಸಾಲಿನಲ್ಲಿ ಇರ್ಷಾದ್ ಕರ್ನೂರ್ ಸ್ಮರಿಸಲ್ಪಡುತ್ತಿದ್ದು....

ಇನ್ಸಾಅಲ್ಲಾಹ್ ಎಲ್ಲ ಮಿತ್ರರು ಇರ್ಷಾದ್ ಕರ್ನೂರ್ ಪರಲೋಕ ಮೋಕ್ಷಕ್ಕಾಗಿ ಪ್ರಾರ್ಥಿಸುವಂತೆಯೂ ತಹ್ಲೀಲ್ ಸಮರ್ಪಿಸುವಂತೆಯೂ ಕೇಳಿಕೊಳ್ಳುತ್ತ...

ತಹ್ಲೀಲ್ ಹೇಳಲು ಇಚ್ಚಿಸುವವರು ಈ ಕೆಳಗಿನ ವಾಟ್ಸಾಪ್ ನಂಗೆ ಪರ್ಸನಲಾಗಿ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ...
8971778483

✍ರಾಫಿ ನಗರ

No comments:

Post a Comment

thank you

Popular Posts

Blog Archive