Wednesday, 20 September 2017

ಪುತ್ತೂರು ಶಾಲಾ- ಕಾಲೇಜು ಕ್ಯಾಂಪಸ್ ವಿದ್ಯಾರ್ಥಿಗಳನ್ನೊಳಗೊಂಡ ತಂಡದಿಂದ ಮೊಳಗಲಿದೆ ಪ್ರವಾದಿ ಪ್ರಕೀರ್ತನೆ.

 ಹೌದು. ಅದೆಷ್ಟೋ ವಿದ್ಯಾರ್ಥಿಗಳು-ಅಲ್ಲದವರೂ  ದಿನನಿತ್ಯ ಅದೆಷ್ಟು ಹರಾಮ್ ಗಳಿಗೊಳಪಡುತ್ತಾರೋ ಅಲ್ಲಾಹನೇ ಬಲ್ಲ. ಅದರಲ್ಲೂ ಮುಖ್ಯವಾಗಿ *ಮ್ಯೂಸಿಕ್ ಹಾಡು , ಆರ್ಕೆಸ್ಟ್ರಾ* ಮುಂತಾದ ಇಸ್ಲಾಂ ನಿಷಿದ್ಧಗೊಳಿಸಿದ ಕಾರ್ಯಗಳು ನಮ್ಮಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುತ್ತಿದೆ.

ಮ್ಯೂಸಿಕ್ ಹಾಡು - ಅರ್ಕೆಸ್ಟ್ರಾ ಗಳನ್ನು  ಇಷ್ಟಪಡುವ ಕೆಲವರಿದ್ದರೆ, ಇಸ್ಲಾಂ ಅದನ್ನೆಲ್ಲಾ ನಿಷೇಧಿಸಿದೆ ಎಂಬವರು ಹಲವರು.
  ಅದೆಷ್ಟೋ ವಿದ್ಯಾರ್ಥಿಗಳು ಮ್ಯೂಸಿಕ್ ಹಾಡಿನ ಹಿಂದೆ ಓಡುವಾಗ ಕೆಲವು ವಿದ್ಯಾರ್ಥಿಗಳ ತಂಡದಿಂದ ಇಸ್ಲಾಮಿನ ಆದರ್ಶ ವನ್ನು ಎತ್ತಿ ಹಿಡಿಯಲೆತ್ನಿಸುತ್ತಿದೆ.
ಅಲ್ ಹಂದುಲಿಲ್ಲಾಹ್

 ಏನೇ ಇರಲಿ ಇಂತಹ ಪರಿಸ್ಥಿತಿಯಲ್ಲಿ ನಮ್ಮ *ಪುತ್ತೂರಿನಿಂದ ಒಂದು ವಿದ್ಯಾರ್ಥಿ ತಂಡವು* ಪ್ರವಾದಿ ಪ್ರಕೀರ್ತನೆಯ ಸಂಕೇತವಾದ *ಬುರ್ದಾ ಆಲಾಪನೆ* ಯೊಂದಿಗೆ ಮುಂದೆ ಬರಲಿದೆ
 ಇಂಷಾ ಅಲ್ಲಾಹ್

 ಇನ್ನೇನು ಕೆಲವೇ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೆಯೇ ಮದುವೆ ಕಾರ್ಯಕ್ರಮಗಳನ್ನು ಪ್ರವಾದಿ ಪ್ರಕೀರ್ತನೆಯಿಂದ ಧನ್ಯಗೊಳಿಸಲಿದ್ದಾರೆ. ಇಂಷಾ ಅಲ್ಲಾಹ್

 *ವಿ‌.ಸೂ:  👉 ಪುತ್ತೂರು ಆಸುಪಾಸಿನ ಹಾಡುಗಾರರಾದ ವಿದ್ಯಾರ್ಥಿಗಳಿದ್ದಲ್ಲಿ ಇಬ್ಬರಿಗೆ ಅವಕಾಶವಿರುತ್ತದೆ.*

👉  *ತಂಡದ ಉದ್ಘಾಟನೆಯು ಸಪ್ಟಂಬರ್  28 - 2017 ರಂದು ನಡೆಯಲಿದೆ. ಇಂಷಾ ಅಲ್ಲಾಹ್*


 *9740194554*
 *9611234246*

*ಸಂಪರ್ಕಿಸಿ*👆

ಪ್ರತ್ಯೇಕ ಮನವಿ

        ಪ್ರತ್ಯೇಕ ಮನವಿ

*  ಎಲ್ಲ ಮುಸ್ಲಿಂ ಸಹೋದರರ ಗಮನಕ್ಕೆ ಶರೀಫ್ ನಂದಾವರ* ಎಂಬ ಅಪ್ಪಟ ಸಮುದಾಯ ಸೇವಕನೋರ್ವನಿಗೆ ಜನ್ಮ ನೀಡಿದ ಭಾಗ್ಯವಂತೆ ತಾಯಿ *ಆಸಿಯಮ್ಮ ನಂದಾವರ*(65) ಇಂದು(ಸೆ.20, 2017) ನಿಧನರಾಗಿದ್ದಾರೆ. 

ರಾತ್ರಿ 10 ಗಂಟೆಗೆ ಜನಾಝ್ ನಮಾಝ್/ದಫನ್ ನಂದಾವರ ಕೇಂದ್ರ ಜುಮಾಮಸೀದಿಯಲ್ಲಿ ನೆರವೇರಲಿದೆ.
ಎಲ್ಲರೂ ಜನಾಝ ನಮಾಝ್ ನಲ್ಲೂ ದಫನ್ ಕಾರ್ಯದಲ್ಲೂ ಭಾಗವಹಿಸಬೇಕಾಗಿ ವಿನಂತಿ. 


*ಪ್ರೀತಿಯ ಸಹೋದರರೇ
ಶರೀಫ್ ನಂದಾವರ ತಾಯಿಯ ಮೇಲೆ ಸಾದ್ಯವಾದಷ್ಟು ಯಾಸೀನ್,ಸೂರತುಲ್ ಇಖ್ಲಾಸ್ ಓದಿ,
ತಹ್ಲೀಲ್ ಹೇಳಿ 
ಹದ್ ಯ ಮಾಡಿ
-SSF panemangaloru sector

Tuesday, 19 September 2017

SSF ಚಟ್ಟೆಕ್ಕಲ್ ಶಾಖೆ ವತಿಯಿಂದ ದ್ವಜ ದಿನಾಚರಣೆ

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ 28ನೇ ವರ್ಷದ ಪ್ರಯುಕ್ತ ಎಸ್ಸೆಸ್ಸೆಫ್ ಚಟ್ಟೆಕ್ಕಲ್ ಯೂನಿಟ್ ವತಿಯಿಂದ ಧ್ವಜ ದಿನ ಅಚರಿಸಲಾಯಿತು. ಸೆಯ್ಯಿದ್ ಮುಶ್ತಾಖುಕ್ರಮಾನ್ ತಂಙಳ್ ಧ್ವಜರೋಹಣ ನೆರೆವೆರಿಸಿ ದುಆ ನಡೆಸಿದರು

ಈ ಕಾರ್ಯಕ್ರಮದಲ್ಲಿ ಶಾಖಾಧ್ಯಕ್ಷ ಇಸ್ಮಾಯಿಲ್, ಸಜಿಪ ರೀಜಿನ್ ಅಧ್ಯಕ್ಷ ಅಬ್ದುಲ್ ರಹಿಮಾನ್,ರಫೀಕ್ ಸಅದಿ,ಎಸ್ಸೆಸ್ಸೆಫ್ ಬಂಟ್ಟಾಳ ಡಿವಿಜನ್ ಸದಸ್ಯ ಹಾರೀಸ್ ಚಟ್ಟೆಕ್ಕಲ್,ಶಾಖಾ ಕಾರ್ಯದರ್ಶಿ ಶಾಕೀರ್ ಉಪಸ್ಥಿತರಿದ್ದರು



REPORTED BY -HARIS CHATTEKAL

ಸಂಘಟನೆಯ ಉತ್ತುಂಗದ ಹಿಂದೆ ಇಖ್ಲಾಸ್'ನ ಬುನಾದಿಯಿದೆ - SSF ಆಲಡ್ಕ ಶಾಖೆ ಧ್ವಜ ದಿನ ಸಂಗಮದಲ್ಲಿ ಅಶ್ರಫ್ ಖಾಮಿಲ್ ಸಖಾಫಿ ಸವಣೂರು....


ಕೇರಳದಲ್ಲಿ 44 ವರ್ಷಗಳ ಹಿಂದೆ ಹುಟ್ಟಿ ಆದರ್ಶ ವಿಪ್ಲವವನ್ನು ಸೃಷ್ಟಿಸಿದ ಸರಿಸಾಟಿಯಿಲ್ಲದ ವಿಧ್ಯಾರ್ಥಿ ಪ್ರಸ್ಥಾನ ,ಕರ್ನಾಟಕದ ಮಣ್ಣಿನಲ್ಲಿ ಅಧಿಕೃತವಾಗಿ ನೋಂದಣಿಗೊಂಡು ಇಂದಿಗೆ 28 ಸಂವತ್ಸರಗಳು ದಾಟುತ್ತಿದೆ. ಇದರ ಶುಭಸಂದರ್ಭದಲ್ಲಿ SSF ಆಲಡ್ಕ ಶಾಖೆಯ ವತಿಯಿಂದ ನಡೆದ ಧ್ವಜ ದಿನ ಸಂಗಮದಲ್ಲಿ ಧ್ವಜಾರೋಹಣ ಮತ್ತು ದುಆಗೆ ನೇತ್ರತ್ವ ನೀಡಿದ ಸ್ಥಳೀಯ ಮುದರ್ರಿಸ್ ಉಸ್ತಾದ್ ಅಶ್ರಫ್ ಖಾಮಿಲ್ ಸಖಾಫಿ ಧ್ವಜ ದಿನದ ಸಂದೇಶವನ್ನು ನೀಡಿದರು.
ಸಂಘಟನೆಯ  ಕಾರ್ಯಕರ್ತರಾಗಳು ಜನರು ಬಯಸುವ ತವಕ ಮತ್ತು ದೇಶ ವಿದೇಶಗಳಲ್ಲಿ ಸಂಘಟನೆಯು ಉತ್ತುಂಗ ಸ್ಥಿತಿಗೆ ತಲುಪಲು  ಹಲವಾರು ಕಾರ್ಯಕರ್ತರ, ನಾಯಕರ ನಿಷ್ಕಳಂಕವಾದ ಪರಿಶ್ರಮದ ಫಲವಿದೆ ಎಂದು ನೆನಪಿಸಿದರು. ಯುನಿಟ್ ಅಧ್ಯಕ್ಷ  ಯಹ್ಯಾ ಮದನಿ ಸ್ವಾಗತಿಸಿ, ಕಾರ್ಯದರ್ಶಿ ರಹ್ಮತುಲ್ಲಾ ಸಿದ್ದೀಕ್ ವಂದಿಸಿದರು. SYS ಪ್ರಮುಖರು , ಕಾರ್ಯಕರ್ತರು ಉಪಸ್ಥಿತರಿದ್ದರು.                                                                                                                                                                                      

















   REPORT BY MOUSUF ABDULLA                                                                                                                               

Popular Posts

Popular Posts

Blog Archive